ಚಂಡಿಗಡ: ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ಕಟ್ಟಡ ಮಾಲೀಕನ ಗುಂಡೇಟಿನಿಂದ ಗಾಯಗೊಂಡಿದ್ದ ಲೋಕೋಪಯೋಗಿ ಇಲಾಖೆ ನೌಕರರೊಬ್ಬರು ಮೃತಪಟ್ಟಿದ್ದಾರೆ.
ಗುಲಾಬ್ ಸಿಂಗ್ (46) ಮೃತಪಟ್ಟವರು. ನ್ಯಾಯಾಲಯದ ಆದೇಶದ ಮೇರೆಗೆ ಮೇ 1ರಂದು ಅತಿಥಿಗೃಹ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ಕಟ್ಟಡ ಮಾಲೀಕನ ಪುತ್ರ ವಿಜಯ್ ಸಿಂಗ್ ಎಂಬಾತ ಇವರ ಮೇಲೆ ಗುಂಡು ಹಾರಿಸಿದ್ದ. ಶೈಲಾ ಬಾಲ ಶರ್ಮಾ ಎಂಬುವವರನ್ನೂ ಈತ ಗುಂಡು ಹಾರಿಸಿ ಹತ್ಯೆಗೈದಿದ್ದ.