<p>ಮುಂಬೈ (ಪಿಟಿಐ): ರಾಳೆಗಣಸಿದ್ಧಿಯಲ್ಲಿ ಮಂಗಳವಾರ ಗ್ರಾಮಸ್ಥರೊಂದಿಗೆ ದೀಪಾವಳಿ ಆಚರಣೆ ಮಾಡಿದ ಅಣ್ಣಾ ಹಜಾರೆ ಅವರು, `ಜನ ಲೋಕಪಾಲ ಮಸೂದೆಯನ್ನು ಸಂಸತ್ ಅಂಗೀಕರಿಸಿದ ದಿನ ನಿಜವಾದ ದೀಪಾವಳಿ ಆಗಲಿದೆ~ ಎಂದರು.<br /> <br /> ಮೌನ ವ್ರತ ಪೂರ್ಣಗೊಳಿಸಿದ ನಂತರ ಅಣ್ಣಾ ಗ್ರಾಮಸ್ಥರೊಂದಿಗೆ ದೀಪಾವಳಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, ತಾವು ನಡೆಸಿದ ಚಳವಳಿ ಸಂದರ್ಭದಲ್ಲಿ ಬೆಂಬಲ ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.<br /> <br /> ನವದೆಹಲಿ ವರದಿ: ಹೋರಾಟದ ಎಚ್ಚರಿಕೆ: ಭ್ರಷ್ಟಾಚಾರ ವಿರೋಧಿ ಚಳವಳಿ ನಡೆಸುತ್ತಿರುವ ಪ್ರಮುಖರನ್ನು ಸರ್ಕಾರ ಗುರಿ ಮಾಡಿ ತೊಂದರೆ ನೀಡಿದರೆ, ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.<br /> <br /> ಅಣ್ಣಾ ತಂಡದ ಸದಸ್ಯರ ವಿರುದ್ಧ ಸರ್ಕಾರ ಈಗ ಒಂದಲ್ಲಾ ಒಂದು ರೀತಿಯ ಆರೋಪ ಮಾಡುತ್ತಿದ್ದು, ವಿವಾದದಲ್ಲಿ ಸಿಲುಕಿಸುತ್ತಿದೆ. ಸರ್ಕಾರದ ಪ್ರವೃತ್ತಿ ಇದೇ ರೀತಿ ಮುಂದುವರೆದರೆ ಅಗಸ್ಟ್ನಲ್ಲಿ ನಡೆದ ಚಳವಳಿಗಿಂತಲೂ ದೊಡ್ಡ ಚಳವಳಿ ರೂಪಿಸಬೇಕಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.<br /> <br /> ವಿಮಾನ ಪ್ರಯಾಣದ ವೇಳೆ ರಿಯಾಯ್ತಿ ಪಡೆದು, ಕಾರ್ಯಕ್ರಮ ಸಂಘಟಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಕಿರಣ್ ಬೇಡಿ ಅವರನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.<br /> <br /> ಕಿರಣ್ ಬೇಡಿ ತಪ್ಪು ಮಾಡಿದ್ದರೆ ಅವರನ್ನು ಜೈಲಿಗೆ ಕಳುಹಿಸಿ ಇಲ್ಲವೇ ನೇಣಿಗೇರಿಸಿ ಎಂದಿರುವ ಅವರು, ಅವರು (ಬೇಡಿ) ತಪ್ಪು ಮಾಡಿದ್ದರೆ ಆ ಬಗ್ಗೆ ಸೂಕ್ತ ತನಿಖೆಗೆ ನಡೆಸಿ, ಆದರೆ ಬೇಡಿ ವಿರುದ್ಧದ ಆರೋಪಗಳನ್ನು ಒಪ್ಪಿ ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.<br /> <br /> `ನಾವು ತಪ್ಪು ಮಾಡಿದ್ದರೆ ಕ್ಷಮಿಸಬೇಡಿ, ಸಾಮಾನ್ಯ ಜನರಿಗೆ ನೀಡುವ ಶಿಕ್ಷೆಯ ದುಪ್ಪಟ್ಟು ಶಿಕ್ಷೆ ನೀಡಿ. ಆದರೆ ಜನಲೋಕಪಾಲ ಮಸೂದೆಯನ್ನು ಜಾರಿಗೆ ತನ್ನಿ~ ಎಂದು ಒತ್ತಾಯ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಬೈ (ಪಿಟಿಐ): ರಾಳೆಗಣಸಿದ್ಧಿಯಲ್ಲಿ ಮಂಗಳವಾರ ಗ್ರಾಮಸ್ಥರೊಂದಿಗೆ ದೀಪಾವಳಿ ಆಚರಣೆ ಮಾಡಿದ ಅಣ್ಣಾ ಹಜಾರೆ ಅವರು, `ಜನ ಲೋಕಪಾಲ ಮಸೂದೆಯನ್ನು ಸಂಸತ್ ಅಂಗೀಕರಿಸಿದ ದಿನ ನಿಜವಾದ ದೀಪಾವಳಿ ಆಗಲಿದೆ~ ಎಂದರು.<br /> <br /> ಮೌನ ವ್ರತ ಪೂರ್ಣಗೊಳಿಸಿದ ನಂತರ ಅಣ್ಣಾ ಗ್ರಾಮಸ್ಥರೊಂದಿಗೆ ದೀಪಾವಳಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, ತಾವು ನಡೆಸಿದ ಚಳವಳಿ ಸಂದರ್ಭದಲ್ಲಿ ಬೆಂಬಲ ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.<br /> <br /> ನವದೆಹಲಿ ವರದಿ: ಹೋರಾಟದ ಎಚ್ಚರಿಕೆ: ಭ್ರಷ್ಟಾಚಾರ ವಿರೋಧಿ ಚಳವಳಿ ನಡೆಸುತ್ತಿರುವ ಪ್ರಮುಖರನ್ನು ಸರ್ಕಾರ ಗುರಿ ಮಾಡಿ ತೊಂದರೆ ನೀಡಿದರೆ, ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.<br /> <br /> ಅಣ್ಣಾ ತಂಡದ ಸದಸ್ಯರ ವಿರುದ್ಧ ಸರ್ಕಾರ ಈಗ ಒಂದಲ್ಲಾ ಒಂದು ರೀತಿಯ ಆರೋಪ ಮಾಡುತ್ತಿದ್ದು, ವಿವಾದದಲ್ಲಿ ಸಿಲುಕಿಸುತ್ತಿದೆ. ಸರ್ಕಾರದ ಪ್ರವೃತ್ತಿ ಇದೇ ರೀತಿ ಮುಂದುವರೆದರೆ ಅಗಸ್ಟ್ನಲ್ಲಿ ನಡೆದ ಚಳವಳಿಗಿಂತಲೂ ದೊಡ್ಡ ಚಳವಳಿ ರೂಪಿಸಬೇಕಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.<br /> <br /> ವಿಮಾನ ಪ್ರಯಾಣದ ವೇಳೆ ರಿಯಾಯ್ತಿ ಪಡೆದು, ಕಾರ್ಯಕ್ರಮ ಸಂಘಟಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಕಿರಣ್ ಬೇಡಿ ಅವರನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.<br /> <br /> ಕಿರಣ್ ಬೇಡಿ ತಪ್ಪು ಮಾಡಿದ್ದರೆ ಅವರನ್ನು ಜೈಲಿಗೆ ಕಳುಹಿಸಿ ಇಲ್ಲವೇ ನೇಣಿಗೇರಿಸಿ ಎಂದಿರುವ ಅವರು, ಅವರು (ಬೇಡಿ) ತಪ್ಪು ಮಾಡಿದ್ದರೆ ಆ ಬಗ್ಗೆ ಸೂಕ್ತ ತನಿಖೆಗೆ ನಡೆಸಿ, ಆದರೆ ಬೇಡಿ ವಿರುದ್ಧದ ಆರೋಪಗಳನ್ನು ಒಪ್ಪಿ ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.<br /> <br /> `ನಾವು ತಪ್ಪು ಮಾಡಿದ್ದರೆ ಕ್ಷಮಿಸಬೇಡಿ, ಸಾಮಾನ್ಯ ಜನರಿಗೆ ನೀಡುವ ಶಿಕ್ಷೆಯ ದುಪ್ಪಟ್ಟು ಶಿಕ್ಷೆ ನೀಡಿ. ಆದರೆ ಜನಲೋಕಪಾಲ ಮಸೂದೆಯನ್ನು ಜಾರಿಗೆ ತನ್ನಿ~ ಎಂದು ಒತ್ತಾಯ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>