<p><strong>ನವದೆಹಲಿ (ಪಿಟಿಐ): </strong>ಜೀವ ವಿಮೆ, ಭವಿಷ್ಯ ನಿಧಿ, ಮ್ಯೂಚುವಲ್ ಫಂಡ್, ರಾಷ್ಟ್ರೀಯ ಸಾಲಪತ್ರ ಸೇರಿದಂತೆ ವಿವಿಧ ರೀತಿಯ ಹಣಕಾಸು ಯೋಜನೆಗಳಲ್ಲಿ ಸಾರ್ವಜನಿಕರು ಮಾಡಿರುವ ಹೂಡಿಕೆಗೆ ನೀಡಿರುವ ತೆರಿಗೆ ವಿನಾಯ್ತಿ ಮಿತಿಯನ್ನು ಹಣಕಾಸು ಸಚಿವಾಲಯ ಪ್ರಸಕ್ತ ಬಜೆಟ್ನಲ್ಲಿ 2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.</p>.<p>ಜನಸಾಮಾನ್ಯರ ಉಳಿತಾಯನ್ನು ಹಣದುಬ್ಬರದಿಂದ ರಕ್ಷಿಸಲು ಸಚಿವಾಲಯ ಈ ಕ್ರಮ ಕೈಗೊಳ್ಳಲಿದೆ. ತೆರಿಗೆ ವಿನಾಯ್ತಿ ಬಯಸುವ ವೇತನ ವರ್ಗದವರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.<br /> <br /> ಇದುವರೆಗೆ ಆದಾಯ ತೆರಿಗೆಯ 80 ಸಿ, 80 ಸಿಸಿ ಮತ್ತು 80ಸಿಸಿಸಿಯಡಿ, ವಿವಿಧ ರೀತಿಯ ಹಣಕಾಸು ಹೂಡಿಕೆ ಯೋಜನೆಗಳಿಗೆ 1 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಇದೀಗ ಇದನ್ನು ದ್ವಿಗುಣಗೊಳಿಸಲು ಸಚಿವಾಲಯ ಚಿಂತಿಸುತ್ತಿದೆ.<br /> ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜುಲೈ 10ರಂದು ಮಂಡಿಸಲಿರುವ 2014–15ನೇ ಸಾಲಿನ ಬಜೆಟ್ನಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.<br /> <br /> ಕುಟುಂಬ ಸದಸ್ಯರ ಹೂಡಿಕೆ ಉತ್ತೇಜಿಸಲು ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸಬೇಕು ಎಂದು ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದ್ದವು.<br /> <br /> ಹಣದುಬ್ಬರ ಹೆಚ್ಚಳ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2008ರಲ್ಲಿ ‘ಜಿಡಿಪಿ’ಯ ಶೇ 38ರಷ್ಟಿದ್ದ ಭಾರತೀಯ ಕುಟುಂಬ ಸದಸ್ಯರ ಉಳಿತಾಯ ಪ್ರಮಾಣ 2012–13ರಲ್ಲಿ ‘ಜಿಡಿಪಿ’ಯ ಶೇ 30ಕ್ಕೆ ಕುಸಿತ ಕಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಜೀವ ವಿಮೆ, ಭವಿಷ್ಯ ನಿಧಿ, ಮ್ಯೂಚುವಲ್ ಫಂಡ್, ರಾಷ್ಟ್ರೀಯ ಸಾಲಪತ್ರ ಸೇರಿದಂತೆ ವಿವಿಧ ರೀತಿಯ ಹಣಕಾಸು ಯೋಜನೆಗಳಲ್ಲಿ ಸಾರ್ವಜನಿಕರು ಮಾಡಿರುವ ಹೂಡಿಕೆಗೆ ನೀಡಿರುವ ತೆರಿಗೆ ವಿನಾಯ್ತಿ ಮಿತಿಯನ್ನು ಹಣಕಾಸು ಸಚಿವಾಲಯ ಪ್ರಸಕ್ತ ಬಜೆಟ್ನಲ್ಲಿ 2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.</p>.<p>ಜನಸಾಮಾನ್ಯರ ಉಳಿತಾಯನ್ನು ಹಣದುಬ್ಬರದಿಂದ ರಕ್ಷಿಸಲು ಸಚಿವಾಲಯ ಈ ಕ್ರಮ ಕೈಗೊಳ್ಳಲಿದೆ. ತೆರಿಗೆ ವಿನಾಯ್ತಿ ಬಯಸುವ ವೇತನ ವರ್ಗದವರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.<br /> <br /> ಇದುವರೆಗೆ ಆದಾಯ ತೆರಿಗೆಯ 80 ಸಿ, 80 ಸಿಸಿ ಮತ್ತು 80ಸಿಸಿಸಿಯಡಿ, ವಿವಿಧ ರೀತಿಯ ಹಣಕಾಸು ಹೂಡಿಕೆ ಯೋಜನೆಗಳಿಗೆ 1 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಇದೀಗ ಇದನ್ನು ದ್ವಿಗುಣಗೊಳಿಸಲು ಸಚಿವಾಲಯ ಚಿಂತಿಸುತ್ತಿದೆ.<br /> ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜುಲೈ 10ರಂದು ಮಂಡಿಸಲಿರುವ 2014–15ನೇ ಸಾಲಿನ ಬಜೆಟ್ನಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.<br /> <br /> ಕುಟುಂಬ ಸದಸ್ಯರ ಹೂಡಿಕೆ ಉತ್ತೇಜಿಸಲು ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸಬೇಕು ಎಂದು ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದ್ದವು.<br /> <br /> ಹಣದುಬ್ಬರ ಹೆಚ್ಚಳ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2008ರಲ್ಲಿ ‘ಜಿಡಿಪಿ’ಯ ಶೇ 38ರಷ್ಟಿದ್ದ ಭಾರತೀಯ ಕುಟುಂಬ ಸದಸ್ಯರ ಉಳಿತಾಯ ಪ್ರಮಾಣ 2012–13ರಲ್ಲಿ ‘ಜಿಡಿಪಿ’ಯ ಶೇ 30ಕ್ಕೆ ಕುಸಿತ ಕಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>