ಕೋಲ್ಕತ್ತ (ಐಎಎನ್ಎಸ್): ತಮ್ಮ ರಾಜಧಾನಿಗೆ ನೀಲಿ ಮತ್ತು ಬಿಳಿ ಬಣ್ಣದ ಸಮವಸ್ತ್ರ ತೊಡಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಇದರಿಂದ `ಪಿಂಕ್ ಸಿಟಿ~ ಎಂದು ಖ್ಯಾತವಾಗಿರುವ ಜೈಪುರಕ್ಕೆ ಈಗ ಪ್ರತಿಸ್ಪರ್ಧಿ ಹುಟ್ಟಿಕೊಂಡಂತಾಗಿದೆ.
ಕೋಲ್ಕತ್ತ ಮಹಾನಗರದ ಉದ್ಯಾನವನಗಳು, ರಸ್ತೆಗಳು, ರೈಲ್ವೆ ಲೇನ್, ಜಂಕ್ಷನ್ಗಳು, ಮೇಲ್ಸೇತುವೆಗಳು, ಸಿಟಿ ಟ್ಯಾಕ್ಸಿ ಮಾತ್ರವಲ್ಲದೆ ಮರದ ಕೊಂಬೆಗಳು ಕೂಡ ಏಕರೂಪದ ಬಣ್ಣ ಲೇಪಿಸಿಕೊಳ್ಳಲಿವೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರಿಕಲ್ಪನೆ.