ನವದೆಹಲಿ (ಪಿಟಿಐ): ಚಲಿಸುತ್ತಿದ್ದ ಬಸ್ನಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಎರಡು ವರ್ಷ ತುಂಬಿದ ಕಾರಣ ಈ ಕರಾಳ ಘಟನೆ ಮರುಕಳಿಸದಂತೆ ಜಾಗೃತಿ ಮೂಡಿಸುವ ಸಲುವಾಗಿ ದೆಹಲಿಯಲ್ಲಿ ಮಂಗಳವಾರ ಮೊಂಬತ್ತಿ ಹಚ್ಚಿ ಮೆರವಣಿಗೆ, ಪ್ರಾರ್ಥನಾ ಸಭೆಗಳು, ಬೀದಿ ನಾಟಕ ಮತ್ತಿತರ ಚಟುವಟಿಕೆಗಳು ನಡೆಯಿತು.
‘ಎರಡು ವರ್ಷಗಳ ಹಿಂದಿನ ಈ ದಿನ (ಡಿ.16) ನನ್ನ ಮಗಳು ಇನ್ನು 23 ತಾಸುಗಳಲ್ಲಿ ವಾಪಸು ಬರುವುದಾಗಿ ಹೇಳಿದ್ದಳು. ಆದರೆ, ಅವಳು ಬರಲೇ ಇಲ್ಲ’ ಎಂದು ಸಾಮೂಹಿಕ ಅತ್ಯಾಚಾರದಿಂದ ಸಾವನ್ನಪ್ಪಿದ ಯುವತಿಯ ತಾಯಿ ಹೇಳಿದರು. ಅವರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.
*ಬಳಕೆಯಾಗದ ನಿರ್ಭಯ ನಿಧಿ: ಸ್ಥಾಯಿ ಸಮಿತಿ ಟೀಕೆ