ನವದೆಹಲಿ (ಪಿಟಿಐ): ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಮರಳುವ ಪ್ರಯತ್ನಗಳು ಮತ್ತೆ ಚುರುಕು ಪಡೆದಿವೆ. ಬಿಜೆಪಿಯೊಂದಿಗೆ ಕೆಜೆಪಿ ವಿಲೀನಗೊಳಿಸುವ ಬಗ್ಗೆ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿ ಜೊತೆಗೆ ಚರ್ಚಿಸಲು ಬಿಎಸ್ವೈ ತಮ್ಮ ಪರವಾಗಿ ಬುಧವಾರ ಸಂಧಾನಕಾರರೊಬ್ಬರನ್ನು ನವದೆಹಲಿಗೆ ಕಳುಹಿಸಿದ್ದಾರೆ.