ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವ, ಕರ್ನಾಟಕದ ರಮೇಶ್ ಜಿಗಜಿಣಗಿ ಅವರು ಲೋಕಸಭೆಯಲ್ಲಿ ಹಿಂದಿಯಲ್ಲಿ ಮಾತ ನಾಡಿದಾಗ ಸಭೆ ನಗೆಗಡಲಲ್ಲಿ ಮುಳುಗಿತು.
ಪಶ್ಚಿಮ ಬಂಗಾಳದ ಚಹಾ ತೋಟದ ಕಾರ್ಮಿಕರ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಸಚಿವರು ಉತ್ತರಿಸುತ್ತ , ‘ಸಮಸ್ಯಾಕೊ ನಿಪ್ಟದೆಂಗೆ’ (ಸಮಸ್ಯೆಯನ್ನು ಮುಗಿಸಲಾಗುತ್ತದೆ) ಎಂದು ಹೇಳಿದಾಗ ಸಭೆಯು ನಗೆಗಡಲಲ್ಲಿ ಮುಳುಗಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹಿಂದಿ ಕಮ್ ಆತಿ ಹೈ, ಕ್ಷಮಾ ಕರ್ನಾ’ (ನನಗೆ ಹಿಂದಿ ಸರಿಯಾಗಿ ಬರಲ್ಲ, ಕ್ಷಮಿಸಿ) ಎಂದಾಗ ಸದಸ್ಯರು ಅವರ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದರು.