<div> <strong>ಲಖನೌ: </strong>ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಮಾಜಿ ಕಾರು ಚಾಲಕ ಕರ್ನಲ್ನಿಜಾಮುದ್ದೀನ್ (117) ಉತ್ತರಪ್ರದೇಶದ ಅಜಂಗಡ ಜಿಲ್ಲೆಯ ಧಾಕ್ವಾದಲ್ಲಿ ಸೋಮವಾರ ಕೊನೆಯುಸಿರೆಳೆದರು. ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.<div> </div><div> ಸೋಮವಾರ ಬೆಳಿಗ್ಗೆ ನಿಜಾಮುದ್ದೀನ್ ಸಾವನ್ನಪ್ಪಿದರು ಎಂದು ಅವರ ಪುತ್ರ ಅಕ್ರಂ ತಿಳಿಸಿದರು.</div><div> </div><div> ಪಾಸ್ಪೋರ್ಟ್ ದಾಖಲೆಗಳ ಪ್ರಕಾರ, ನಿಜಾಮುದ್ದೀನ್ ಜನವರಿ 11900ರಲ್ಲಿ ಜನಿಸಿದ್ದರು. ಕಳೆದ ವರ್ಷ 113 ವರ್ಷದ ಪತ್ನಿ ಅಜ್ಬಿನ್ನೀಸಾ ಜತೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಆ ಮೂಲಕ ದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿದ ‘ಅತ್ಯಂತ ಹಿರಿಯ ನಾಗರಿಕರು’ ಎಂಬ ಹಿರಿಮೆಗೂ ಪಾತ್ರರಾಗಿದ್ದರು.</div><div> </div><div> ನೇತಾಜಿ, ಮ್ಯಾನ್ಮಾರ್ನಲ್ಲಿದ್ದ ವೇಳೆ ನಿಜಾಮುದ್ದೀನ್ ಚಾಲಕರಾಗಿ ಕೆಲಸ ಮಾಡಿದ್ದರು. 1947ರ ಆಗಸ್ಟ್ 22ರಂದು ಚಿತ್ತಗಾಂಗ್ ನದಿ ತಟದಲ್ಲಿ ಬೋಸ್ ಅವರನ್ನು ಕೊನೇ ಬಾರಿಗೆ ನೋಡಿರುವುದಾಗಿ ತಿಳಿಸಿದ್ದರು. </div><div> </div><div> 23 ನೇ ವಯಸ್ಸಿಗೆ ಸಿಂಗಪುರಕ್ಕೆ ತೆರಳಿದ್ದ ನಿಜಾಮುದ್ದೀನ್ ಅಲ್ಲಿ ತಂದೆ ನಡೆಸುತ್ತಿದ್ದ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು. 1943ರಲ್ಲಿ ನೇತಾಜಿ ಸಂಪರ್ಕಕ್ಕೆ ಬಂದು ಅವರ ಕಾರು ಚಾಲಕ ಭದ್ರತಾ ಸಿಬ್ಬಂದಿಯ ಹೊಣೆ ಹೊತ್ತಿದ್ದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಲಖನೌ: </strong>ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಮಾಜಿ ಕಾರು ಚಾಲಕ ಕರ್ನಲ್ನಿಜಾಮುದ್ದೀನ್ (117) ಉತ್ತರಪ್ರದೇಶದ ಅಜಂಗಡ ಜಿಲ್ಲೆಯ ಧಾಕ್ವಾದಲ್ಲಿ ಸೋಮವಾರ ಕೊನೆಯುಸಿರೆಳೆದರು. ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.<div> </div><div> ಸೋಮವಾರ ಬೆಳಿಗ್ಗೆ ನಿಜಾಮುದ್ದೀನ್ ಸಾವನ್ನಪ್ಪಿದರು ಎಂದು ಅವರ ಪುತ್ರ ಅಕ್ರಂ ತಿಳಿಸಿದರು.</div><div> </div><div> ಪಾಸ್ಪೋರ್ಟ್ ದಾಖಲೆಗಳ ಪ್ರಕಾರ, ನಿಜಾಮುದ್ದೀನ್ ಜನವರಿ 11900ರಲ್ಲಿ ಜನಿಸಿದ್ದರು. ಕಳೆದ ವರ್ಷ 113 ವರ್ಷದ ಪತ್ನಿ ಅಜ್ಬಿನ್ನೀಸಾ ಜತೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಆ ಮೂಲಕ ದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿದ ‘ಅತ್ಯಂತ ಹಿರಿಯ ನಾಗರಿಕರು’ ಎಂಬ ಹಿರಿಮೆಗೂ ಪಾತ್ರರಾಗಿದ್ದರು.</div><div> </div><div> ನೇತಾಜಿ, ಮ್ಯಾನ್ಮಾರ್ನಲ್ಲಿದ್ದ ವೇಳೆ ನಿಜಾಮುದ್ದೀನ್ ಚಾಲಕರಾಗಿ ಕೆಲಸ ಮಾಡಿದ್ದರು. 1947ರ ಆಗಸ್ಟ್ 22ರಂದು ಚಿತ್ತಗಾಂಗ್ ನದಿ ತಟದಲ್ಲಿ ಬೋಸ್ ಅವರನ್ನು ಕೊನೇ ಬಾರಿಗೆ ನೋಡಿರುವುದಾಗಿ ತಿಳಿಸಿದ್ದರು. </div><div> </div><div> 23 ನೇ ವಯಸ್ಸಿಗೆ ಸಿಂಗಪುರಕ್ಕೆ ತೆರಳಿದ್ದ ನಿಜಾಮುದ್ದೀನ್ ಅಲ್ಲಿ ತಂದೆ ನಡೆಸುತ್ತಿದ್ದ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು. 1943ರಲ್ಲಿ ನೇತಾಜಿ ಸಂಪರ್ಕಕ್ಕೆ ಬಂದು ಅವರ ಕಾರು ಚಾಲಕ ಭದ್ರತಾ ಸಿಬ್ಬಂದಿಯ ಹೊಣೆ ಹೊತ್ತಿದ್ದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>