<p><strong>ಕ್ರೀರಿ (ಜಮ್ಮು ಮತ್ತು ಕಾಶ್ಮೀರ):</strong> ಅಪರಿಚಿತ ಬಂದೂಕು ಧಾರಿಯ ಗುಂಡಿಗೆ ಬಲಿಯಾಗಿದ್ದ ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ಶುಕ್ರ ವಾರ ನಡೆಯಿತು.</p>.<p>ಶ್ರೀನಗರದಿಂದ ಕೆಲವೇ ಗಂಟೆಗಳ ಪಯಣದಷ್ಟು ದೂರದಲ್ಲಿರುವ ಬಾರಾ ಮುಲ್ಲಾ ಜಿಲ್ಲೆಯ ಕ್ರೀರಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವ ಜನಿಕರು ಭಾಗವಹಿಸಿದ್ದರು.</p>.<p><strong>ಪಾಕಿಸ್ತಾನದ ಖಂಡನೆ:</strong> ‘ಬುಖಾರಿ ಅವರ ಹತ್ಯೆಯಿಂದ ನಮಗೆ ಆಘಾತ ಮತ್ತು ದುಃಖವಾಗಿದೆ. ಈ ಹತ್ಯೆಯನ್ನು ಪಾಕಿಸ್ತಾನವು ಖಂಡಿಸುತ್ತದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.</p>.<p><em><strong>(ಬುಖಾರಿ ಅವರ ಪತ್ನಿಯ ಅಳಲು)</strong></em></p>.<p><strong>ಶಂಕಿತರ ಚಿತ್ರ ಬಿಡುಗಡೆ:</strong> ಉಗ್ರರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.</p>.<p>‘ದಾಳಿ ನಡೆದ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ, ಮೂವರು ಬೈಕ್ ಒಂದರಲ್ಲಿ ಹೋಗುತ್ತಿರುವ ದೃಶ್ಯ ಸೆರೆ ಯಾಗಿದೆ. ದಾಳಿ ಸಮಯದಲ್ಲಿ ಬೇರೆ ಯಾವುದೇ ಬೈಕ್ಗಳು ಅಲ್ಲಿ ಸಂಚರಿಸಿಲ್ಲ. ಹೀಗಾಗಿ ಆ ಮೂವರೇ ದಾಳಿಕೋರರು ಎಂದು ಶಂಕಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p><strong>ಒಬ್ಬನ ಬಂಧನ: </strong>ಹತ್ಯೆಗೆ ಸಂಬಂಧಿಸಿ ದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬುಖಾರಿ ಅವರ ದೇಹವನ್ನು ಕಾರಿನಿಂದ ಇಳಿಸು ವಾಗ, ಕಾರಿನಲ್ಲಿದ್ದ ಪಿಸ್ತೂಲನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ.</p>.<p>ಹತ್ಯೆಯ ನಂತರದ ಘಟನೆಗಳನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸುವ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಂದ ಪಿಸ್ತೂಲನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.</p>.<p>ಬುಖಾರಿ ತಮ್ಮ ಅಂಕಣ ಮತ್ತು ಚರ್ಚೆಗಳಲ್ಲಿ ಜನರ ಸಮಸ್ಯೆಗಳ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಆದರೆ ಇಂದು ಅತ್ಯಂತ ಕ್ರೂರವಾಗಿ ಆ ದನಿಯನ್ನು ಹತ್ತಿಕ್ಕಲಾಗಿದೆ.</p>.<p><em><strong>–ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ</strong></em></p>.<p>**</p>.<p>ಇದು ಅತ್ಯಂತ ಹೇಯ ಮತ್ತು ಖಂಡನೀಯ ಕೃತ್ಯ. ಬುಖಾರಿ ಹತ್ಯೆಯಿಂದ ಪತ್ರಿಕಾ ಲೋಕಕ್ಕೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.</p>.<p><em><strong>–ಎನ್.ಎನ್.ವ್ಹೋರಾ, </strong></em><em><strong>ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ</strong></em></p>.<p><em><strong>**</strong></em></p>.<p>ಮುಖ್ಯವಾಹಿನಿಯ ರಾಜಕಾರಣಕ್ಕೆ ಸರಿಹೊಂದುವಂತೆ ಬರೆಯದ ಪತ್ರಕರ್ತರಿಗೆಲ್ಲಾ ಅಪಾಯ ಕಾದಿದೆ ಎಂಬ ಅಭಿಪ್ರಾಯ ಈಗ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.</p>.<p><em><strong>–ಎಂ.ವೈ.ತಾರಿಗಾಮಿ, </strong></em><em><strong>ಕುಲಗಾಂನ ಸಿಪಿಎಂ ಶಾಸಕ</strong></em></p>.<p>**</p>.<p>ಇಂತಹ ಆಘಾತದ ಸಂರ್ಭದಲ್ಲೂ ಪತ್ರಿಕೆಯ ಸಂಚಿಕೆ ಹೊರತಂದು, ರೈಸಿಂಗ್ ಕಾಶ್ಮೀರ್ನ ಸಿಬ್ಬಂದಿ ಬುಖಾರಿ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.</p>.<p><strong><em>–</em></strong><strong><em>ಒಮರ್ ಅಬ್ದುಲ್ಲಾ, </em></strong><strong><em>ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ</em></strong></p>.<p><strong><em>**</em></strong></p>.<p><strong>ಮುಖಪುಟದಲ್ಲಿ ಶ್ರದ್ಧಾಂಜಲಿ</strong></p>.<p>ಶುಜಾತ್ ಬುಖಾರಿ ಹತ್ಯೆಯನ್ನು ಖಂಡಿಸಿ ರೈಸಿಂಗ್ ಕಾಶ್ಮೀರ್ ಪತ್ರಿಕೆಯು ಶುಕ್ರವಾರದ ಸಂಚಿಕೆಯ ಮುಖಪುಟವನ್ನು ಕಪ್ಪು–ಬಿಳುಪಾಗಿ ಪ್ರಕಟಿಸಿದೆ. ಮುಖಪುಟದಲ್ಲಿ ಬುಖಾರಿ ಅವರ ಚಿತ್ರವನ್ನು ಪ್ರಕಟಿಸಲಾಗಿದೆ. ಚಿತ್ರಕ್ಕೆ ಹಿನ್ನೆಲೆಯಾಗಿ ಕಪ್ಪುಬಣ್ಣವನ್ನು ಬಳಸಲಾಗಿದೆ.</p>.<p>‘ನೀವು ದಿಢೀರ್ ಎಂದು ನಮ್ಮನ್ನು ಬಿಟ್ಟುಹೋಗಿದ್ದೀರಿ. ಆದರೆ ನಮ್ಮ ವೃತ್ತಿಯಲ್ಲಿ ನೀವೇ ದಾರಿದೀಪವಾಗಿರಲಿದ್ದೀರಿ. ನಿಮ್ಮನ್ನು ನಮ್ಮಿಂದ ಕಸಿದುಕೊಂಡ ಹೇಡಿಗಳ ಈ ಕುಕೃತ್ಯಕ್ಕೆ ನಾವು ಹೆದರುವುದಿಲ್ಲ. ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನು ಹೇಳಲೇಬೇಕು ಎಂಬ ನಿಮ್ಮ ನೀತಿಯನ್ನು ನಾವು ಎತ್ತಿಹಿಡಿಯುತ್ತೇವೆ. ಚಿರಶಾಂತಿ ಸಿಗಲಿ’ ಎಂಬ ಬರಹವನ್ನು ಚಿತ್ರದ ಕೆಳಗೆ ಪ್ರಕಟಿಸಲಾಗಿದೆ.</p>.<p>**</p>.<p><strong>ಒಬ್ಬನ ಬಂಧನ</strong></p>.<p>ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬುಖಾರಿ ಅವರ ದೇಹವನ್ನು ಕಾರಿನಿಂದ ಇಳಿಸುವಾಗ, ಕಾರಿನಲ್ಲಿದ್ದ ಪಿಸ್ತೂಲನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ.</p>.<p>ಹತ್ಯೆಯ ನಂತರದ ಘಟನೆಗಳನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸುವ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಂದ ಪಿಸ್ತೂಲನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ರೀರಿ (ಜಮ್ಮು ಮತ್ತು ಕಾಶ್ಮೀರ):</strong> ಅಪರಿಚಿತ ಬಂದೂಕು ಧಾರಿಯ ಗುಂಡಿಗೆ ಬಲಿಯಾಗಿದ್ದ ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ಶುಕ್ರ ವಾರ ನಡೆಯಿತು.</p>.<p>ಶ್ರೀನಗರದಿಂದ ಕೆಲವೇ ಗಂಟೆಗಳ ಪಯಣದಷ್ಟು ದೂರದಲ್ಲಿರುವ ಬಾರಾ ಮುಲ್ಲಾ ಜಿಲ್ಲೆಯ ಕ್ರೀರಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವ ಜನಿಕರು ಭಾಗವಹಿಸಿದ್ದರು.</p>.<p><strong>ಪಾಕಿಸ್ತಾನದ ಖಂಡನೆ:</strong> ‘ಬುಖಾರಿ ಅವರ ಹತ್ಯೆಯಿಂದ ನಮಗೆ ಆಘಾತ ಮತ್ತು ದುಃಖವಾಗಿದೆ. ಈ ಹತ್ಯೆಯನ್ನು ಪಾಕಿಸ್ತಾನವು ಖಂಡಿಸುತ್ತದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.</p>.<p><em><strong>(ಬುಖಾರಿ ಅವರ ಪತ್ನಿಯ ಅಳಲು)</strong></em></p>.<p><strong>ಶಂಕಿತರ ಚಿತ್ರ ಬಿಡುಗಡೆ:</strong> ಉಗ್ರರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.</p>.<p>‘ದಾಳಿ ನಡೆದ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ, ಮೂವರು ಬೈಕ್ ಒಂದರಲ್ಲಿ ಹೋಗುತ್ತಿರುವ ದೃಶ್ಯ ಸೆರೆ ಯಾಗಿದೆ. ದಾಳಿ ಸಮಯದಲ್ಲಿ ಬೇರೆ ಯಾವುದೇ ಬೈಕ್ಗಳು ಅಲ್ಲಿ ಸಂಚರಿಸಿಲ್ಲ. ಹೀಗಾಗಿ ಆ ಮೂವರೇ ದಾಳಿಕೋರರು ಎಂದು ಶಂಕಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p><strong>ಒಬ್ಬನ ಬಂಧನ: </strong>ಹತ್ಯೆಗೆ ಸಂಬಂಧಿಸಿ ದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬುಖಾರಿ ಅವರ ದೇಹವನ್ನು ಕಾರಿನಿಂದ ಇಳಿಸು ವಾಗ, ಕಾರಿನಲ್ಲಿದ್ದ ಪಿಸ್ತೂಲನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ.</p>.<p>ಹತ್ಯೆಯ ನಂತರದ ಘಟನೆಗಳನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸುವ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಂದ ಪಿಸ್ತೂಲನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.</p>.<p>ಬುಖಾರಿ ತಮ್ಮ ಅಂಕಣ ಮತ್ತು ಚರ್ಚೆಗಳಲ್ಲಿ ಜನರ ಸಮಸ್ಯೆಗಳ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಆದರೆ ಇಂದು ಅತ್ಯಂತ ಕ್ರೂರವಾಗಿ ಆ ದನಿಯನ್ನು ಹತ್ತಿಕ್ಕಲಾಗಿದೆ.</p>.<p><em><strong>–ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ</strong></em></p>.<p>**</p>.<p>ಇದು ಅತ್ಯಂತ ಹೇಯ ಮತ್ತು ಖಂಡನೀಯ ಕೃತ್ಯ. ಬುಖಾರಿ ಹತ್ಯೆಯಿಂದ ಪತ್ರಿಕಾ ಲೋಕಕ್ಕೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.</p>.<p><em><strong>–ಎನ್.ಎನ್.ವ್ಹೋರಾ, </strong></em><em><strong>ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ</strong></em></p>.<p><em><strong>**</strong></em></p>.<p>ಮುಖ್ಯವಾಹಿನಿಯ ರಾಜಕಾರಣಕ್ಕೆ ಸರಿಹೊಂದುವಂತೆ ಬರೆಯದ ಪತ್ರಕರ್ತರಿಗೆಲ್ಲಾ ಅಪಾಯ ಕಾದಿದೆ ಎಂಬ ಅಭಿಪ್ರಾಯ ಈಗ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.</p>.<p><em><strong>–ಎಂ.ವೈ.ತಾರಿಗಾಮಿ, </strong></em><em><strong>ಕುಲಗಾಂನ ಸಿಪಿಎಂ ಶಾಸಕ</strong></em></p>.<p>**</p>.<p>ಇಂತಹ ಆಘಾತದ ಸಂರ್ಭದಲ್ಲೂ ಪತ್ರಿಕೆಯ ಸಂಚಿಕೆ ಹೊರತಂದು, ರೈಸಿಂಗ್ ಕಾಶ್ಮೀರ್ನ ಸಿಬ್ಬಂದಿ ಬುಖಾರಿ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.</p>.<p><strong><em>–</em></strong><strong><em>ಒಮರ್ ಅಬ್ದುಲ್ಲಾ, </em></strong><strong><em>ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ</em></strong></p>.<p><strong><em>**</em></strong></p>.<p><strong>ಮುಖಪುಟದಲ್ಲಿ ಶ್ರದ್ಧಾಂಜಲಿ</strong></p>.<p>ಶುಜಾತ್ ಬುಖಾರಿ ಹತ್ಯೆಯನ್ನು ಖಂಡಿಸಿ ರೈಸಿಂಗ್ ಕಾಶ್ಮೀರ್ ಪತ್ರಿಕೆಯು ಶುಕ್ರವಾರದ ಸಂಚಿಕೆಯ ಮುಖಪುಟವನ್ನು ಕಪ್ಪು–ಬಿಳುಪಾಗಿ ಪ್ರಕಟಿಸಿದೆ. ಮುಖಪುಟದಲ್ಲಿ ಬುಖಾರಿ ಅವರ ಚಿತ್ರವನ್ನು ಪ್ರಕಟಿಸಲಾಗಿದೆ. ಚಿತ್ರಕ್ಕೆ ಹಿನ್ನೆಲೆಯಾಗಿ ಕಪ್ಪುಬಣ್ಣವನ್ನು ಬಳಸಲಾಗಿದೆ.</p>.<p>‘ನೀವು ದಿಢೀರ್ ಎಂದು ನಮ್ಮನ್ನು ಬಿಟ್ಟುಹೋಗಿದ್ದೀರಿ. ಆದರೆ ನಮ್ಮ ವೃತ್ತಿಯಲ್ಲಿ ನೀವೇ ದಾರಿದೀಪವಾಗಿರಲಿದ್ದೀರಿ. ನಿಮ್ಮನ್ನು ನಮ್ಮಿಂದ ಕಸಿದುಕೊಂಡ ಹೇಡಿಗಳ ಈ ಕುಕೃತ್ಯಕ್ಕೆ ನಾವು ಹೆದರುವುದಿಲ್ಲ. ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನು ಹೇಳಲೇಬೇಕು ಎಂಬ ನಿಮ್ಮ ನೀತಿಯನ್ನು ನಾವು ಎತ್ತಿಹಿಡಿಯುತ್ತೇವೆ. ಚಿರಶಾಂತಿ ಸಿಗಲಿ’ ಎಂಬ ಬರಹವನ್ನು ಚಿತ್ರದ ಕೆಳಗೆ ಪ್ರಕಟಿಸಲಾಗಿದೆ.</p>.<p>**</p>.<p><strong>ಒಬ್ಬನ ಬಂಧನ</strong></p>.<p>ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬುಖಾರಿ ಅವರ ದೇಹವನ್ನು ಕಾರಿನಿಂದ ಇಳಿಸುವಾಗ, ಕಾರಿನಲ್ಲಿದ್ದ ಪಿಸ್ತೂಲನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ.</p>.<p>ಹತ್ಯೆಯ ನಂತರದ ಘಟನೆಗಳನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸುವ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಂದ ಪಿಸ್ತೂಲನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>