ಬೃಂದಾವನ/ಉತ್ತರ ಪ್ರದೇಶ (ಪಿಟಿಐ): ನದಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಬೃಂದಾವನದಲ್ಲಿನ ವಿಧವೆಯರು ಮಂಗಳವಾರ ಯಮುನಾ ನದಿಯಲ್ಲಿ ನೂರಾರು ಹಣತೆಗಳನ್ನು ತೇಲಿಬಿಡುವುದರ ಮೂಲಕ ಮೂರು ದಿನಗಳ ದೀಪಾವಳಿ ಸಂಭ್ರಮವನ್ನು ಸ್ವಾಗತಿಸಿದರು.
ಕೈಯಲ್ಲಿ ಬಣ್ಣದ ‘ದಿಯಾ’ (ಹಣತೆ) ಹಿಡಿದು ಭಕ್ತಿ ಗೀತೆಗಳನ್ನು ಹಾಡುತ್ತಾ ಅವರು ನದಿ ತೀರದತ್ತ ಮೆರವಣಿಗೆ ನಡೆಸಿದರು.