ರಾಮೇಶ್ವರ(ತಮಿಳುನಾಡು)(ಪಿಟಿಐ): ಲಂಕಾ ನೌಕಾಪಡೆ ಸಿಬ್ಬಂದಿ ಬೆದರಿಕೆ ನಡುವೆಯೂ ಮೂರು ಸಾವಿರ ಭಾರತೀಯ ಮೀನುಗಾರರು ಶ್ರೀಲಂಕಾದ ಕಚ್ಚತೀವು ದ್ವೀಪದಿಂದ ಸುರಕ್ಷಿತವಾಗಿ ಭಾನುವಾರ ವಾಪಸಾಗಿದ್ದಾರೆ. ಐದು ವೇಗದ ನೌಕೆ ಹಾಗೂ ಒಂದು ಹಡಗಿನಲ್ಲಿ ದ್ವೀಪಕ್ಕೆ ಬಂದ ಲಂಕಾ ನೌಕಾ ಪಡೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.