ಜಲ್ನಾ (ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿ ನಕ್ಸಲೀಯರು ಬರೆದಿದ್ದಾರೆ ಎನ್ನಲಾದ ಪತ್ರದ ಅಸಲೀತನ ಕುರಿತು ಅನುಮಾನ ಪಡುತ್ತಿರುವವರ ವಿರುದ್ಧ, ಕೇಂದ್ರ ಸಚಿವ ಹಾಗೂ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕ ರಾಮದಾಸ್ ಅಠಾವಳೆ ಹರಿಹಾಯ್ದಿದ್ದಾರೆ.
‘ರಾಜಕೀಯ ಮಾಡಲು ಬೇರೆ ವಿಷಯಗಳು ಇವೆ. ಇದು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಷಯ ಆಗಿರುವುದರಿಂದ ಇಲ್ಲಿ ರಾಜಕೀಯ ಮಾಡಬಾರದು’ ಎಂದು ಆಗ್ರಹಿಸಿದ್ದಾರೆ.