<p><strong>ಲಖನೌ: </strong>ಆಗ್ರಾದ ನಗರ ಪಾಲಿಕೆಯಲ್ಲಿ ವಿವಿಧ ರೀತಿಯ ಕೆಲಸಗಳಿಗೆ ಅಧಿಕಾರಿಗಳು ಪಡೆಯುವ ಲಂಚದ ಮಾಹಿತಿ ಉಳ್ಳ ಪತ್ರವನ್ನು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ರಾಜ್ಯದ ಲೋಕೋಪಯೋಗಿ ಸಚಿವರಿಗೆ ಕಳುಹಿಸಿದ್ದು, ಈ ಮೂಲಕ ತಮ್ಮದೇ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.</p>.<p>ಪತ್ರದ ಪ್ರಕಾರ ಪಾಲಿಕೆ ಆಯುಕ್ತರಿಂದ ಎಂಜಿನಿಯರ್, ಗುಮಾಸ್ತರ ತನಕವೂ ಹುದ್ದೆ ಆಧಾರದ ಮೇಲೆ ಪಡೆಯುವ ಲಂಚದ ಮೊತ್ತ ವ್ಯತ್ಯಾಸವಾಗುತ್ತದೆ.</p>.<p>‘ಅಧಿಕಾರಿಗಳು ಪಡೆಯುವ ಭಾರಿ ಮೊತ್ತದ ಲಂಚದಿಂದಾಗಿ ಯೋಜನೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಪದ್ಧತಿಗೆ ತಕ್ಷಣವೇ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರಿಗೆ ಗರ್ಗ್ ಮನವಿ ಮಾಡಿದ್ದಾರೆ.</p>.<p><strong>ಬಿಜೆಪಿ ಅವಧಿಯಲ್ಲಿ ಇಳಿಕೆ: </strong>ಆದರೆ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಪ್ರಮಾಣ ಇಳಿಕೆಯಾಗಿದೆ ಎಂದು ಗರ್ಗ್ ಹೇಳಿದ್ದಾರೆ. ‘ಈ ಮೊದಲು ಶೇ 32 ಇದ್ದ ಲಂಚದ ಪ್ರಮಾಣ ಈಗ ಶೇ 27 ಆಗಿದೆ. ಶೇ 5ರಷ್ಟು ಲಂಚದ ಪ್ರಮಾಣ ಇಳಿಕೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.</p>.<p><strong>ಆಕ್ಷೇಪ: </strong>ಗರ್ಗ್ ತಮ್ಮ ಪತ್ರವನ್ನು ಬಹಿರಂಗಪಡಿಸಬಾರದಿತ್ತು ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: </strong>ಆಗ್ರಾದ ನಗರ ಪಾಲಿಕೆಯಲ್ಲಿ ವಿವಿಧ ರೀತಿಯ ಕೆಲಸಗಳಿಗೆ ಅಧಿಕಾರಿಗಳು ಪಡೆಯುವ ಲಂಚದ ಮಾಹಿತಿ ಉಳ್ಳ ಪತ್ರವನ್ನು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ರಾಜ್ಯದ ಲೋಕೋಪಯೋಗಿ ಸಚಿವರಿಗೆ ಕಳುಹಿಸಿದ್ದು, ಈ ಮೂಲಕ ತಮ್ಮದೇ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.</p>.<p>ಪತ್ರದ ಪ್ರಕಾರ ಪಾಲಿಕೆ ಆಯುಕ್ತರಿಂದ ಎಂಜಿನಿಯರ್, ಗುಮಾಸ್ತರ ತನಕವೂ ಹುದ್ದೆ ಆಧಾರದ ಮೇಲೆ ಪಡೆಯುವ ಲಂಚದ ಮೊತ್ತ ವ್ಯತ್ಯಾಸವಾಗುತ್ತದೆ.</p>.<p>‘ಅಧಿಕಾರಿಗಳು ಪಡೆಯುವ ಭಾರಿ ಮೊತ್ತದ ಲಂಚದಿಂದಾಗಿ ಯೋಜನೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಪದ್ಧತಿಗೆ ತಕ್ಷಣವೇ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರಿಗೆ ಗರ್ಗ್ ಮನವಿ ಮಾಡಿದ್ದಾರೆ.</p>.<p><strong>ಬಿಜೆಪಿ ಅವಧಿಯಲ್ಲಿ ಇಳಿಕೆ: </strong>ಆದರೆ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಪ್ರಮಾಣ ಇಳಿಕೆಯಾಗಿದೆ ಎಂದು ಗರ್ಗ್ ಹೇಳಿದ್ದಾರೆ. ‘ಈ ಮೊದಲು ಶೇ 32 ಇದ್ದ ಲಂಚದ ಪ್ರಮಾಣ ಈಗ ಶೇ 27 ಆಗಿದೆ. ಶೇ 5ರಷ್ಟು ಲಂಚದ ಪ್ರಮಾಣ ಇಳಿಕೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.</p>.<p><strong>ಆಕ್ಷೇಪ: </strong>ಗರ್ಗ್ ತಮ್ಮ ಪತ್ರವನ್ನು ಬಹಿರಂಗಪಡಿಸಬಾರದಿತ್ತು ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>