<p><strong>ನವದೆಹಲಿ (ಪಿಟಿಐ): </strong>2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಮತ್ತು ಇತರ ಇಬ್ಬರ ವಿರುದ್ಧ ಸಾರ್ವಜನಿಕ ಸೇವೆಯಲ್ಲಿರುವವರು ವಿಶ್ವಾಸ ದ್ರೋಹ ಎಸಗಿದ ಹೊಸ ಆರೋಪವನ್ನು ಹೊರಿಸಲು ಸಿಬಿಐ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.<br /> <br /> ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ಯು. ಲಲಿತ್ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರಲ್ಲಿ ಈ ಕುರಿತ ಮನವಿ ದಾಖಲಿಸಿದ್ದಾರೆ.ಭಾರತೀಯ ದಂಡ ಸಂಹಿತೆಯ 409ನೇ ಸೆಕ್ಷನ್ನಡಿ ವಿಶ್ವಾಸ ದ್ರೋಹದ ಪ್ರಕರಣವನ್ನು ರಾಜಾ, ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯ ಮತ್ತು ದೂರಸಂಪರ್ಕ ಖಾತೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ವಿರುದ್ಧ `ಖಚಿತವಾಗಿ ದಾಖಲಿಸಬಹುದು~ ಎಂದು ಮನವಿ ಹೇಳಿದೆ.<br /> </p>.<p>ರಾಜಾ ಮತ್ತು ಇಬ್ಬರು ಮಾಜಿ ಅಧಿಕಾರಿಗಳಲ್ಲದೆ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಮೂರು ದೂರಸಂಪರ್ಕ ಸಂಸ್ಥೆಗಳ ವಿರುದ್ಧವೂ 409ನೇ ಸೆಕ್ಷನ್ನಡಿ (ಕ್ರಿಮಿನಲ್ ದ್ರೋಹ) ಆರೋಪ ಹೊರಿಸಬಹುದು ಎಂದು ಸಿಬಿಐ ತಿಳಿಸಿದೆ. <br /> <br /> `ಆರೋಪಿಗಳಾದ 1,2 ಮತ್ತು 3 (ರಾಜಾ, ಬೆಹುರಾ ಮತ್ತು ಚಂದೋಲಿಯ) ಸಾರ್ವಜನಿಕ ಸೇವಕರಾಗಿದ್ದು 2ಜಿ ತರಂಗಾಂತರದ ಬಗ್ಗೆ ಪರಮಾಧಿಕಾರ ಹೊಂದಿದ್ದರು. <br /> <br /> ಇವರು ಇತರ ಆರೋಪಿಗಳ ಜತೆ ಪಿತೂರಿ ನಡೆಸಿ ಮೌಲ್ಯಯುತ 2ಜಿ ತರಂಗಾಂತರವನ್ನು ಅಕ್ರಮವಾಗಿ ಹಾಗೂ ನೀತಿ ನಿಯಮ ಉಲ್ಲಂಘಿಸಿ ಆರೋಪಿಗಳಾದ ನಂ.4 (ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ), 5 (ವಿನೋದ್ ಗೋಯೆಂಕಾ), 6 (ಸ್ವಾನ್ ಟೆಲಿಕಾಂ), 7 (ಯೂನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ) ಮತ್ತು 9 (ಯೂನಿಟೆಕ್ ವೈರ್ಲೆಸ್ ತಮಿಳುನಾಡು ಲಿ.)ಗೆ ನ್ಯಾಯಬಾಹಿರವಾಗಿ ಲಾಭ ಮಾಡಿಕೊಟ್ಟಿದ್ದಾರೆ~ ಎಂದು ಸಿಬಿಐ ಕೋರ್ಟ್ಗೆ ಹೇಳಿದೆ.<br /> <br /> `ಈ ಮೂಲಕ ಆರೋಪಿ ರಾಜಾ, ಬೆಹುರಾ ಮತ್ತು ಚಂದೋಲಿಯ ಹಾಗೂ ಇತರ ಆರೋಪಿಗಳು ಐಪಿಸಿ 409ನೇ ಸೆಕ್ಷನ್ನಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ~ ಸಿಬಿಐ ಮನವಿ ವಿವರಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಮತ್ತು ಇತರ ಇಬ್ಬರ ವಿರುದ್ಧ ಸಾರ್ವಜನಿಕ ಸೇವೆಯಲ್ಲಿರುವವರು ವಿಶ್ವಾಸ ದ್ರೋಹ ಎಸಗಿದ ಹೊಸ ಆರೋಪವನ್ನು ಹೊರಿಸಲು ಸಿಬಿಐ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.<br /> <br /> ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ಯು. ಲಲಿತ್ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರಲ್ಲಿ ಈ ಕುರಿತ ಮನವಿ ದಾಖಲಿಸಿದ್ದಾರೆ.ಭಾರತೀಯ ದಂಡ ಸಂಹಿತೆಯ 409ನೇ ಸೆಕ್ಷನ್ನಡಿ ವಿಶ್ವಾಸ ದ್ರೋಹದ ಪ್ರಕರಣವನ್ನು ರಾಜಾ, ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯ ಮತ್ತು ದೂರಸಂಪರ್ಕ ಖಾತೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ವಿರುದ್ಧ `ಖಚಿತವಾಗಿ ದಾಖಲಿಸಬಹುದು~ ಎಂದು ಮನವಿ ಹೇಳಿದೆ.<br /> </p>.<p>ರಾಜಾ ಮತ್ತು ಇಬ್ಬರು ಮಾಜಿ ಅಧಿಕಾರಿಗಳಲ್ಲದೆ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಮೂರು ದೂರಸಂಪರ್ಕ ಸಂಸ್ಥೆಗಳ ವಿರುದ್ಧವೂ 409ನೇ ಸೆಕ್ಷನ್ನಡಿ (ಕ್ರಿಮಿನಲ್ ದ್ರೋಹ) ಆರೋಪ ಹೊರಿಸಬಹುದು ಎಂದು ಸಿಬಿಐ ತಿಳಿಸಿದೆ. <br /> <br /> `ಆರೋಪಿಗಳಾದ 1,2 ಮತ್ತು 3 (ರಾಜಾ, ಬೆಹುರಾ ಮತ್ತು ಚಂದೋಲಿಯ) ಸಾರ್ವಜನಿಕ ಸೇವಕರಾಗಿದ್ದು 2ಜಿ ತರಂಗಾಂತರದ ಬಗ್ಗೆ ಪರಮಾಧಿಕಾರ ಹೊಂದಿದ್ದರು. <br /> <br /> ಇವರು ಇತರ ಆರೋಪಿಗಳ ಜತೆ ಪಿತೂರಿ ನಡೆಸಿ ಮೌಲ್ಯಯುತ 2ಜಿ ತರಂಗಾಂತರವನ್ನು ಅಕ್ರಮವಾಗಿ ಹಾಗೂ ನೀತಿ ನಿಯಮ ಉಲ್ಲಂಘಿಸಿ ಆರೋಪಿಗಳಾದ ನಂ.4 (ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ), 5 (ವಿನೋದ್ ಗೋಯೆಂಕಾ), 6 (ಸ್ವಾನ್ ಟೆಲಿಕಾಂ), 7 (ಯೂನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ) ಮತ್ತು 9 (ಯೂನಿಟೆಕ್ ವೈರ್ಲೆಸ್ ತಮಿಳುನಾಡು ಲಿ.)ಗೆ ನ್ಯಾಯಬಾಹಿರವಾಗಿ ಲಾಭ ಮಾಡಿಕೊಟ್ಟಿದ್ದಾರೆ~ ಎಂದು ಸಿಬಿಐ ಕೋರ್ಟ್ಗೆ ಹೇಳಿದೆ.<br /> <br /> `ಈ ಮೂಲಕ ಆರೋಪಿ ರಾಜಾ, ಬೆಹುರಾ ಮತ್ತು ಚಂದೋಲಿಯ ಹಾಗೂ ಇತರ ಆರೋಪಿಗಳು ಐಪಿಸಿ 409ನೇ ಸೆಕ್ಷನ್ನಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ~ ಸಿಬಿಐ ಮನವಿ ವಿವರಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>