ನವದೆಹಲಿ: ಶಾರದಾ ಚಿಟ್ಫಂಡ್ ಹಗರಣದಲ್ಲಿ ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ನೀಡಲಾಗಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.
ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸುವಂತೆ ಸಿಜೆಐ ರಂಜನ್ ಗೊಗೋಯಿ ಅವರನ್ನು ಒಳಗೊಂಡ ಪೀಠ ಸಿಬಿಐಗೆ ತಿಳಿಸಿದೆ. ‘ರಾಜೀವ್ ಅವರನ್ನು ಬಂಧಿಸಬಾರದು ಎಂದು ಫೆ.5 ರಂದು ನೀಡಿದ್ದ ಆದೇಶ ತೆರವುಗೊಳಿಸುತ್ತಿರುವುದಾಗಿ’ ಸುಪ್ರೀಂ ಕೋರ್ಟ್ ಹೇಳಿದೆ.