<p><strong>ವಿದ್ಯುತ್ ಅವಗಢ: ನಾಲ್ವರ ಸಾವು <br /> ಮುಂಬೈ (ಪಿಟಿಐ): </strong>ಇಲ್ಲಿನ ಅಂಧೇರಿ ಉಪನಗರದ ಎಂಐಡಿಸಿಯಲ್ಲಿರುವ ಇಂಡಸ್ಇಂಡ್ ಬ್ಯಾಂಕ್ನ ಕಾರ್ಯಾಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನಾಲ್ವರು ಸತ್ತು , 13 ಮಂದಿ ಗಾಯಗೊಂಡ ಘಟನೆ ನಡೆದಿದೆ.ಶಾರ್ಟ್ ಸರ್ಕೀಟ್ನಿಂದಾಗಿ ಕಟ್ಟಡದೊಳಗೆ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ. <br /> <br /> <strong>ಅತ್ಯಾಚಾರಿಗೆ ಗಲ್ಲು ಶಿಕ್ಷೆ<br /> ಥಾಣೆ (ಪಿಟಿಐ): </strong>ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಕೊಲೆ ಮಾಡಿದ್ದ 53ವರ್ಷದ ವ್ಯಕ್ತಿ ಯೊಬ್ಬನಿಗೆ ಇಲ್ಲಿನ ತ್ವರಿತ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಮಹಾರಾಷ್ಟ್ರದ ಕೊಪ್ರಿಗಾಂವ್ನ ದತ್ತು ಅಂಬೊ ರೊಖಡೆ ಗಲ್ಲುಶಿಕ್ಷೆಗೆ ಒಳಗಾದ ಆರೋಪಿ.<br /> <br /> 2013ರ ಜನವರಿ 22ರಂದು ಮನೆ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಆರೋಪಿ ರೊಖಡೆ ಆಮಿಷ ಒಡ್ಡಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯ ಕತ್ತು ಹಿಸುಕಿ ಸಾಯಿಸಿ, ಶವವನ್ನು ಗೋಣಿಚೀಲದಲ್ಲಿ ಸುತ್ತಿ, ಕೆಲಕಾಲ ಕಸದ ತೊಟ್ಟಿಯಲ್ಲಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> <strong>ಎನ್ಸಿಪಿ ಸಚಿವರ ರಾಜೀನಾಮೆ<br /> ಮುಂಬೈ (ಪಿಟಿಐ):</strong>ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸಚಿವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರ ಹಾಗೂ ಪಕ್ಷದ ಮಟ್ಟದಲ್ಲಿ ಬೃಹತ್ ಪ್ರಮಾಣದ ಪುನರ್ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ.<br /> <br /> ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಲೋಕೋಪಯೋಗಿ ಸಚಿವ ಛಗನ್ ಭುಜಬಲ್, ಗೃಹ ಸಚಿವ ಆರ್. ಆರ್.ಪಾಟೀಲ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜಯಂತ್ ಪಾಟೀಲ ಅವರು ರಾಜೀನಾಮೆ ನೀಡಿದ ಸಚಿವರಲ್ಲಿ ಸೇರಿದ್ದಾರೆ.<br /> <br /> ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.<br /> <br /> <strong>ಎಸ್ಎಂಎಸ್ ಜಾಗೃತಿ ಅಭಿಯಾನ<br /> ನವದೆಹಲಿ (ಪಿಟಿಐ): </strong>ವೀಕ್ಷಕರು ತಮಗಿಷ್ಟವಾಗುವ ಚಾನೆಲ್ಗಳಿಗೆ ಮಾತ್ರ ದರ ಪಾವತಿಸುವ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಎಸ್ಎಂಎಸ್ ಅಭಿಯಾನ ನಡೆಸಲಿದೆ.<br /> <br /> ಕೇಬಲ್ ಟಿವಿ ವೀಕ್ಷಕರು `ಗ್ರಾಹಕ ಅರ್ಜಿ ನಮೂನೆ' (ಸಿಎಎಫ್) ತುಂಬುವಂತೆ ಪ್ರೇರೇಪಿಸುವ ಎಸ್ಎಂಎಸ್ ಅಭಿಯಾನವನ್ನು ದೇಶದ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ನಡೆಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯೋಜನೆ ರೂಪಿಸಿದೆ.<br /> <br /> <strong>ಹೈದರಾಬಾದ್ `ಮೀನು ಔಷಧಿ' ವಿತರಣೆ<br /> ಹೈದರಾಬಾದ್ (ಐಎಎನ್ಎಸ್):</strong> ಲೋಕಾಯುಕ್ತರ ನಿರ್ಬಂಧದ ನಡುವೆಯೂ ಈ ವರ್ಷವೂ ಆಸ್ತಮಾ ರೋಗಿಗಳಿಗಾಗಿ ಇಲ್ಲಿಯ ಪ್ರದರ್ಶನ ಮೈದಾನದಲ್ಲಿ ಪ್ರಸಿದ್ಧ `ಹೈದರಾಬಾದ್ ಮೀನಿನ ಔಷಧಿ'ಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.<br /> <br /> ಅವೈಜ್ಞಾನಿಕವಾದ ಮೀನಿನ ಔಷಧಿ ವಿತರಣೆಗೆ ಪ್ರೋತ್ಸಾಹ ನೀಡಬೇಡಿ ಎಂದು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಆದರೆ ಇದೇ 8 ಹಾಗೂ 9 ರಂದು ಬಾತಿನಿ ಗೌಡ್ ಕುಟುಂಬದವರು ಜೀವಂತ ಮೀನು ಒಳಗೊಂಡ ಔಷಧಿ ವಿತರಣೆಗೆ ಸಿದ್ಧತೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿದ್ಯುತ್ ಅವಗಢ: ನಾಲ್ವರ ಸಾವು <br /> ಮುಂಬೈ (ಪಿಟಿಐ): </strong>ಇಲ್ಲಿನ ಅಂಧೇರಿ ಉಪನಗರದ ಎಂಐಡಿಸಿಯಲ್ಲಿರುವ ಇಂಡಸ್ಇಂಡ್ ಬ್ಯಾಂಕ್ನ ಕಾರ್ಯಾಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನಾಲ್ವರು ಸತ್ತು , 13 ಮಂದಿ ಗಾಯಗೊಂಡ ಘಟನೆ ನಡೆದಿದೆ.ಶಾರ್ಟ್ ಸರ್ಕೀಟ್ನಿಂದಾಗಿ ಕಟ್ಟಡದೊಳಗೆ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ. <br /> <br /> <strong>ಅತ್ಯಾಚಾರಿಗೆ ಗಲ್ಲು ಶಿಕ್ಷೆ<br /> ಥಾಣೆ (ಪಿಟಿಐ): </strong>ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಕೊಲೆ ಮಾಡಿದ್ದ 53ವರ್ಷದ ವ್ಯಕ್ತಿ ಯೊಬ್ಬನಿಗೆ ಇಲ್ಲಿನ ತ್ವರಿತ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಮಹಾರಾಷ್ಟ್ರದ ಕೊಪ್ರಿಗಾಂವ್ನ ದತ್ತು ಅಂಬೊ ರೊಖಡೆ ಗಲ್ಲುಶಿಕ್ಷೆಗೆ ಒಳಗಾದ ಆರೋಪಿ.<br /> <br /> 2013ರ ಜನವರಿ 22ರಂದು ಮನೆ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಆರೋಪಿ ರೊಖಡೆ ಆಮಿಷ ಒಡ್ಡಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯ ಕತ್ತು ಹಿಸುಕಿ ಸಾಯಿಸಿ, ಶವವನ್ನು ಗೋಣಿಚೀಲದಲ್ಲಿ ಸುತ್ತಿ, ಕೆಲಕಾಲ ಕಸದ ತೊಟ್ಟಿಯಲ್ಲಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> <strong>ಎನ್ಸಿಪಿ ಸಚಿವರ ರಾಜೀನಾಮೆ<br /> ಮುಂಬೈ (ಪಿಟಿಐ):</strong>ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸಚಿವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರ ಹಾಗೂ ಪಕ್ಷದ ಮಟ್ಟದಲ್ಲಿ ಬೃಹತ್ ಪ್ರಮಾಣದ ಪುನರ್ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ.<br /> <br /> ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಲೋಕೋಪಯೋಗಿ ಸಚಿವ ಛಗನ್ ಭುಜಬಲ್, ಗೃಹ ಸಚಿವ ಆರ್. ಆರ್.ಪಾಟೀಲ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜಯಂತ್ ಪಾಟೀಲ ಅವರು ರಾಜೀನಾಮೆ ನೀಡಿದ ಸಚಿವರಲ್ಲಿ ಸೇರಿದ್ದಾರೆ.<br /> <br /> ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.<br /> <br /> <strong>ಎಸ್ಎಂಎಸ್ ಜಾಗೃತಿ ಅಭಿಯಾನ<br /> ನವದೆಹಲಿ (ಪಿಟಿಐ): </strong>ವೀಕ್ಷಕರು ತಮಗಿಷ್ಟವಾಗುವ ಚಾನೆಲ್ಗಳಿಗೆ ಮಾತ್ರ ದರ ಪಾವತಿಸುವ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಎಸ್ಎಂಎಸ್ ಅಭಿಯಾನ ನಡೆಸಲಿದೆ.<br /> <br /> ಕೇಬಲ್ ಟಿವಿ ವೀಕ್ಷಕರು `ಗ್ರಾಹಕ ಅರ್ಜಿ ನಮೂನೆ' (ಸಿಎಎಫ್) ತುಂಬುವಂತೆ ಪ್ರೇರೇಪಿಸುವ ಎಸ್ಎಂಎಸ್ ಅಭಿಯಾನವನ್ನು ದೇಶದ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ನಡೆಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯೋಜನೆ ರೂಪಿಸಿದೆ.<br /> <br /> <strong>ಹೈದರಾಬಾದ್ `ಮೀನು ಔಷಧಿ' ವಿತರಣೆ<br /> ಹೈದರಾಬಾದ್ (ಐಎಎನ್ಎಸ್):</strong> ಲೋಕಾಯುಕ್ತರ ನಿರ್ಬಂಧದ ನಡುವೆಯೂ ಈ ವರ್ಷವೂ ಆಸ್ತಮಾ ರೋಗಿಗಳಿಗಾಗಿ ಇಲ್ಲಿಯ ಪ್ರದರ್ಶನ ಮೈದಾನದಲ್ಲಿ ಪ್ರಸಿದ್ಧ `ಹೈದರಾಬಾದ್ ಮೀನಿನ ಔಷಧಿ'ಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.<br /> <br /> ಅವೈಜ್ಞಾನಿಕವಾದ ಮೀನಿನ ಔಷಧಿ ವಿತರಣೆಗೆ ಪ್ರೋತ್ಸಾಹ ನೀಡಬೇಡಿ ಎಂದು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಆದರೆ ಇದೇ 8 ಹಾಗೂ 9 ರಂದು ಬಾತಿನಿ ಗೌಡ್ ಕುಟುಂಬದವರು ಜೀವಂತ ಮೀನು ಒಳಗೊಂಡ ಔಷಧಿ ವಿತರಣೆಗೆ ಸಿದ್ಧತೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>