<p><strong>ನವದೆಹಲಿ, (ಪಿಟಿಐ):</strong> ಸಂಸದರ ನಿಧಿಯ ಪ್ರಮಾಣವನ್ನು ಐದು ಕೋಟಿ ರೂಪಾಯಿಗೆ ಸರ್ಕಾರ ಹೆಚ್ಚಿಸಿದೆ. ನಿಧಿಯ ಪರಿಣಾಮಕಾರಿಯಾದ ಬಳಕೆಗೆ ಸುಧಾರಿತ ಮಾರ್ಗದರ್ಶಿ ನಿಯಮಗಳೊಂದಿಗೆ ಶೀಘ್ರದಲ್ಲಿ ಬರಲಿದೆ ಎಂದು ಅಂಕಿ ಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯ ಭಾನುವಾರ ಹೇಳಿದೆ. <br /> <br /> ‘ನಾವು ಸಂಸದರ ನಿಧಿಯ ಮಾರ್ಗದರ್ಶಿ ನಿಯಮಗಳ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿದ್ದೇವೆ. ಈಗ ಹೆಚ್ಚಿನ ಹಣ ಒದಗಿಸಲಾಗಿದೆ. ಅದರ ಸರಿಯಾದ ಹಾಗೂ ಪ್ರಾಮಾಣಿಕ ಬಳಕೆ ಮಾಡುವುದಕ್ಕಾಗಿ ಕಠಿಣ ಕೆಲಸ ಮಾಡುತ್ತಿದ್ದೇವೆ’ ಎಂದು ಅಂಕಿಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ಸಚಿವ ಎಂ.ಎಸ್.ಗಿಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಪ್ರತಿ ವರ್ಷ ನೀಡುವ ಸಂಸದರ ನಿಧಿಯನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಶುಕ್ರವಾರ ಪ್ರಕಟಿಸಿದ್ದಾರೆ.ಬೆಲೆಗಳು ಹೆಚ್ಚಾಗಿರುವ ಕಾರಣದಿಂದ ಸಂಸದರ ನಿಧಿಯನ್ನು ಹೆಚ್ಚಿಸುವ ಬೇಡಿಕೆ ದೀರ್ಘ ಕಾಲದಿಂದ ಪರಿಶೀಲನೆಯಲ್ಲಿತ್ತು. ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅನೇಕ ಬಾರಿ ಈ ಅಂಶ ಪ್ರಸ್ತಾಪವಾಗಿತ್ತು. <br /> <br /> ‘ಸಂಸದರಿಗೆ ಹಂಚಿಕೆ ಮಾಡಿದ ನಿಧಿ ಯಾವಾಗಲೂ ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ಬರಬೇಕಾದ ಅಗತ್ಯವಿದೆ. ಅದು ಸರಿಯಾಗಿ ಬಳಕೆಯಾಗಬೇಕಾದ ಅಗತ್ಯ ಕೂಡ ಇದೆ. ನಾವು ಸಂಸದರಿಗೆ ಮಾಹಿತಿಯನ್ನು ಒದಗಿಸುತ್ತೇವೆ. ಸಂಸದರ ನಿಧಿಗೆ ಸಂಸತ್ತಿನ ಎರಡು ಸಮಿತಿಗಳು ಇರುತ್ತವೆ’ ಎಂದು ಗಿಲ್ ಹೇಳಿದರು.<br /> <br /> ‘ಸಂಸದರ ನಿಧಿಯನ್ನು ಹೆಚ್ಚಿಸುವ ಅಗತ್ಯದ ಅರಿವು ನನಗೆ ಇದೆ. 1998ರಲ್ಲಿ ಸಂಸದರ ನಿಧಿಯನ್ನು ಪ್ರತಿ ವರ್ಷ ಎರಡು ಕೋಟಿಗೆ ನಿಗದಿ ಮಾಡಲಾಗಿತ್ತು’ ಎಂದು ಅವರು ಹೇಳಿದರು.‘ನಬಾರ್ಡ್ ಸಲಹಾ ಸೇವೆ (ನಬ್ಕೊನ್) ಈ ಯೋಜನೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಿದೆ. ಅದು ಈ ನಿಧಿಯ ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾದ ಬಳಕೆ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, (ಪಿಟಿಐ):</strong> ಸಂಸದರ ನಿಧಿಯ ಪ್ರಮಾಣವನ್ನು ಐದು ಕೋಟಿ ರೂಪಾಯಿಗೆ ಸರ್ಕಾರ ಹೆಚ್ಚಿಸಿದೆ. ನಿಧಿಯ ಪರಿಣಾಮಕಾರಿಯಾದ ಬಳಕೆಗೆ ಸುಧಾರಿತ ಮಾರ್ಗದರ್ಶಿ ನಿಯಮಗಳೊಂದಿಗೆ ಶೀಘ್ರದಲ್ಲಿ ಬರಲಿದೆ ಎಂದು ಅಂಕಿ ಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯ ಭಾನುವಾರ ಹೇಳಿದೆ. <br /> <br /> ‘ನಾವು ಸಂಸದರ ನಿಧಿಯ ಮಾರ್ಗದರ್ಶಿ ನಿಯಮಗಳ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿದ್ದೇವೆ. ಈಗ ಹೆಚ್ಚಿನ ಹಣ ಒದಗಿಸಲಾಗಿದೆ. ಅದರ ಸರಿಯಾದ ಹಾಗೂ ಪ್ರಾಮಾಣಿಕ ಬಳಕೆ ಮಾಡುವುದಕ್ಕಾಗಿ ಕಠಿಣ ಕೆಲಸ ಮಾಡುತ್ತಿದ್ದೇವೆ’ ಎಂದು ಅಂಕಿಅಂಶ ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ಸಚಿವ ಎಂ.ಎಸ್.ಗಿಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಪ್ರತಿ ವರ್ಷ ನೀಡುವ ಸಂಸದರ ನಿಧಿಯನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಶುಕ್ರವಾರ ಪ್ರಕಟಿಸಿದ್ದಾರೆ.ಬೆಲೆಗಳು ಹೆಚ್ಚಾಗಿರುವ ಕಾರಣದಿಂದ ಸಂಸದರ ನಿಧಿಯನ್ನು ಹೆಚ್ಚಿಸುವ ಬೇಡಿಕೆ ದೀರ್ಘ ಕಾಲದಿಂದ ಪರಿಶೀಲನೆಯಲ್ಲಿತ್ತು. ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅನೇಕ ಬಾರಿ ಈ ಅಂಶ ಪ್ರಸ್ತಾಪವಾಗಿತ್ತು. <br /> <br /> ‘ಸಂಸದರಿಗೆ ಹಂಚಿಕೆ ಮಾಡಿದ ನಿಧಿ ಯಾವಾಗಲೂ ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ಬರಬೇಕಾದ ಅಗತ್ಯವಿದೆ. ಅದು ಸರಿಯಾಗಿ ಬಳಕೆಯಾಗಬೇಕಾದ ಅಗತ್ಯ ಕೂಡ ಇದೆ. ನಾವು ಸಂಸದರಿಗೆ ಮಾಹಿತಿಯನ್ನು ಒದಗಿಸುತ್ತೇವೆ. ಸಂಸದರ ನಿಧಿಗೆ ಸಂಸತ್ತಿನ ಎರಡು ಸಮಿತಿಗಳು ಇರುತ್ತವೆ’ ಎಂದು ಗಿಲ್ ಹೇಳಿದರು.<br /> <br /> ‘ಸಂಸದರ ನಿಧಿಯನ್ನು ಹೆಚ್ಚಿಸುವ ಅಗತ್ಯದ ಅರಿವು ನನಗೆ ಇದೆ. 1998ರಲ್ಲಿ ಸಂಸದರ ನಿಧಿಯನ್ನು ಪ್ರತಿ ವರ್ಷ ಎರಡು ಕೋಟಿಗೆ ನಿಗದಿ ಮಾಡಲಾಗಿತ್ತು’ ಎಂದು ಅವರು ಹೇಳಿದರು.‘ನಬಾರ್ಡ್ ಸಲಹಾ ಸೇವೆ (ನಬ್ಕೊನ್) ಈ ಯೋಜನೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಿದೆ. ಅದು ಈ ನಿಧಿಯ ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾದ ಬಳಕೆ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>