<p><strong>ನವದೆಹಲಿ (ಐಎಎನ್ಎಸ್):</strong> ಹತ್ತಿ ಹಾಗೂ ಸಕ್ಕರೆ ಮೇಲಿನ ನಿರ್ಬಂಧ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕಳವಳ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.<br /> <br /> ಆಹಾರ ಮತ್ತು ಜವಳಿ ಸಚಿವಾಲಯದ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪವಾರ್, ಈ ಎರಡೂ ಇಲಾಖೆಗಳ ನೀತಿಗಳು ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದರು. <br /> <br /> ಈ ವರ್ಷ ಹತ್ತಿ ರಫ್ತಿನ ಕೋಟಾವನ್ನು 1.3 ಕೋಟಿ ಟನ್ ಬೇಲ್ಗಳಿಗೆ ನಿರ್ಬಂಧಿಸಿ, ಸಚಿವರ ಗುಂಪು ಸೋಮವಾರ ಆದೇಶ ಹೊರಡಿಸಿದ ಮಾರನೇ ದಿನವೇ ಪವಾರ್ ಈ ಪತ್ರ ಬರೆದಿದ್ದಾರೆ.<br /> <br /> ಜವಳಿ ಮಿಲ್ಗಳಿಗೆ ನೀಡುವ ಸಹಾಯಧನದ ಹೊರೆಯನ್ನು ಹತ್ತಿ ಬೆಳೆಯುವ ರೈತರು ಹೊತ್ತುಕೊಳ್ಳುವಂತೆ ಕೇಳಬಾರದು ಎಂದು ಹೇಳಿರುವ ಪವಾರ್, ಈ ನಿರ್ಬಂಧದಿಂದ ಜವಳಿ ಗಿರಣಿಗಳಿಗೆ ಲಾಭವಾಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.<br /> <br /> ಹತ್ತಿ ರಫ್ತಿನ ಮೇಲಿನ ನಿರ್ಬಂಧವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ ವಿರೋಧಿಸಿದ್ದಾರೆ. <br /> ಸಕ್ಕರೆ ರಫ್ತಿನ ಕುರಿತಾಗಿಯೂ ಕೃಷಿ ಸಚಿವರು ಆತಂಕ ವ್ಯಕ್ತಪಡಿಸಿದ್ದು, ಈ ವರ್ಷ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡುವ ನಿರ್ಧಾರವನ್ನು ಮಾರ್ಚ್ 26ರಂದೇ ತೆಗೆದುಕೊಳ್ಳಲಾಗಿದ್ದರೂ ಆಹಾರ ಸಚಿವಾಲಯದ ಈ ಸಂಬಂಧ ಆದೇಶ ಹೊರಡಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.<br /> <br /> ಸರ್ಕಾರದ ಮೇಲೆ ಒತ್ತಡ ಹೇರುವುದು ಶರದ್ ಪವಾರ್ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ಹತ್ತಿ ಹಾಗೂ ಸಕ್ಕರೆ ಮೇಲಿನ ನಿರ್ಬಂಧ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕಳವಳ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.<br /> <br /> ಆಹಾರ ಮತ್ತು ಜವಳಿ ಸಚಿವಾಲಯದ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪವಾರ್, ಈ ಎರಡೂ ಇಲಾಖೆಗಳ ನೀತಿಗಳು ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದರು. <br /> <br /> ಈ ವರ್ಷ ಹತ್ತಿ ರಫ್ತಿನ ಕೋಟಾವನ್ನು 1.3 ಕೋಟಿ ಟನ್ ಬೇಲ್ಗಳಿಗೆ ನಿರ್ಬಂಧಿಸಿ, ಸಚಿವರ ಗುಂಪು ಸೋಮವಾರ ಆದೇಶ ಹೊರಡಿಸಿದ ಮಾರನೇ ದಿನವೇ ಪವಾರ್ ಈ ಪತ್ರ ಬರೆದಿದ್ದಾರೆ.<br /> <br /> ಜವಳಿ ಮಿಲ್ಗಳಿಗೆ ನೀಡುವ ಸಹಾಯಧನದ ಹೊರೆಯನ್ನು ಹತ್ತಿ ಬೆಳೆಯುವ ರೈತರು ಹೊತ್ತುಕೊಳ್ಳುವಂತೆ ಕೇಳಬಾರದು ಎಂದು ಹೇಳಿರುವ ಪವಾರ್, ಈ ನಿರ್ಬಂಧದಿಂದ ಜವಳಿ ಗಿರಣಿಗಳಿಗೆ ಲಾಭವಾಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.<br /> <br /> ಹತ್ತಿ ರಫ್ತಿನ ಮೇಲಿನ ನಿರ್ಬಂಧವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ ವಿರೋಧಿಸಿದ್ದಾರೆ. <br /> ಸಕ್ಕರೆ ರಫ್ತಿನ ಕುರಿತಾಗಿಯೂ ಕೃಷಿ ಸಚಿವರು ಆತಂಕ ವ್ಯಕ್ತಪಡಿಸಿದ್ದು, ಈ ವರ್ಷ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡುವ ನಿರ್ಧಾರವನ್ನು ಮಾರ್ಚ್ 26ರಂದೇ ತೆಗೆದುಕೊಳ್ಳಲಾಗಿದ್ದರೂ ಆಹಾರ ಸಚಿವಾಲಯದ ಈ ಸಂಬಂಧ ಆದೇಶ ಹೊರಡಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.<br /> <br /> ಸರ್ಕಾರದ ಮೇಲೆ ಒತ್ತಡ ಹೇರುವುದು ಶರದ್ ಪವಾರ್ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>