ನವದೆಹಲಿ (ಐಎಎನ್ಎಸ್): ಆರುಷಿ ತಲ್ವಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಆಕೆಯ ಪೋಷಕರು ಸೋಮವಾರ ಅಲಹಾಬಾದ್ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು.
‘ನಾವು ಹೈಕೋರ್ಟಿನಲ್ಲಿ ಇವತ್ತು ಅರ್ಜಿ ಸಲ್ಲಿಸಿದ್ದೇವೆ. ಈಗದು ಕೋರ್ಟ್ ಪರಿಧಿಯಲ್ಲಿದೆ. ಹೀಗಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ತಲ್ವಾರ್ ಅವರ ವಕೀಲರಾದ ರೆಬೆಕ್ಕಾ ಜಾನ್ ತಿಳಿಸಿದರು.