ನವದೆಹಲಿ (ಪಿಟಿಐ): ಸಂಕಷ್ಟಕ್ಕೆ ಸಿಲುಕಿರುವ ಮಹಿಳೆ ಗುಂಡಿ ಒತ್ತುವ ಮೂಲಕ ತಾನಿರುವ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗುವ ಸುರಕ್ಷತಾ ಉಪಕರಣ ತಯಾರಿಕೆಗೆ ಶೀಘ್ರದಲ್ಲಿಯೇ ಮಾನದಂಡ ರೂಪಿಸಲಾಗುವುದು ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ಗುರುವಾರ ನಡೆದ ‘ಉತ್ತಮ ಆಡಳಿತ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.