ಹಣ ಹೂಡಿಕೆ ಮಾಡಿದವರಿಗೆ ದೂರು ಸಲ್ಲಿಸಲು ಪ್ರತ್ಯೇಕ ಕೇಂದ್ರ ತೆರೆಯಲಾಗಿದ್ದು, ನಗರದಲ್ಲಿ ಇದುವರೆಗೆ ₹ 14 ಕೋಟಿಗೂ ಹೆಚ್ಚುಹಣ ಹೂಡಿಕೆಯಾಗಿದೆ. ಹಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಕಾರ್ಮಿಕರು, ಕಿರಾಣಿ ಅಂಗಡಿ ನಡೆಸುವವರು, ಚಿಕ್ಕ ವ್ಯಾಪಾರ ನಡೆಸುತ್ತಿದ್ದವರು ಇದ್ದಾರೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ನಿಸಾರ್
ಅಹಮ್ಮದ್ ಎಂಬುವವರು ₹ 40 ಲಕ್ಷ ಹೂಡಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.