ಮಕ್ಕಳಾದ ಸುಬ್ಬು ಮಾರು ಮುಕ್ರಿ (54), ಅಪ್ಪು ಮಾರು ಮುಕ್ರಿ (48) ಹಾಗೂ ನಾರಾಯಣ ಮಾರು ಮುಕ್ತಿ (58) ಮೃತಪಟ್ಟವರು. ಈ ಮೂವರು ಅವಿವಾಹಿತರಾಗಿದ್ದರು. ಗೋಕರ್ಣ ಸಮುದ್ರ ತೀರದಲ್ಲಿ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುತ್ತಿದ್ದ ಚಿಲ್ಲರೆ ಹಣವನ್ನು ಸಂಗ್ರಹಿಸಿ, ಜೀವನ ಸಾಗಿಸುತ್ತಿದ್ದರು. ಇವರು ನಿಜವಾಗಿ ಹಸಿವಿನಿಂದ ಮೃತಪಟ್ಟಿದ್ದಾರೆಯೇ ಅಥವಾ ಮದ್ಯವ್ಯಸನದಿಂದ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆಯೇ ಎಂಬುದು ಖಚಿತವಾಗಿಲ್ಲ.