ಬೇಸಿಗೆ ಮುನ್ನವೇ ನದಿ ಬತ್ತಿದ್ದರಿಂದ ಜನ, ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿತ್ತು. ಈಗ ಮತ್ತೆ ನದಿಯಲ್ಲಿ ನೀರ ಹರಿವು ಕಂಡು ನದಿ ತೀರದ ಜನರು ಸಂತಸಗೊಂಡಿದ್ದಾರೆ. ಮೈಲಾರ, ಹೊಳಲು, ಕತ್ತೆಬೆನ್ನೂರು, ಬ್ಯಾಲಹುಣ್ಸಿ, ಹಿರೇಹಡಗಲಿ-ಮಾಗಳ, ಕೆ.ಅಯ್ಯನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮತ್ತೆ ಚಾಲನೆಗೊಂಡಿದ್ದು, ಕೆಲ ಹಳ್ಳಿಗಳಿಗೆ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ.