‘ಮಹಾಸಭಾ ಸ್ಥಾಪನೆ ಮೂಲಕ ಲಿಂಗಾಯತ ಎಂಬ ಜೇನುತುಪ್ಪದ ಬಾಟಲಿಗೆ ಔಡಲೆಣ್ಣೆಯ ಸ್ಟಿಕ್ಕರ್ ಹಚ್ಚಿ ಸಮಾಜವನ್ನು ಕೆಡಿಸಲಾಯಿತು. ಇದೀಗ ಲಿಂಗಾಯತ ಎನ್ನುವ ಶುದ್ಧ ನೀರಿನಲ್ಲಿ ಸೇರಿಕೊಂಡಿರುವ ವೀರಶೈವ ಎನ್ನುವ ಕಸ ತೆಗೆದು ಶುದ್ಧೀಕರಿಸಬೇಕಿದೆ. ಹಾಗಾಗಿ ವೀರಶೈವ ಮಹಾಸಭಾದಲ್ಲಿರುವ ಲಿಂಗಾಯತ ಸದಸ್ಯರು ಕೂಡಲೇ ರಾಜೀನಾಮೆ ಸಲ್ಲಿಸಿ ಹೊರಗೆ ಬಂದು ಸ್ವತಂತ್ರಧರ್ಮ ಸ್ಥಾಪನೆ ಹೋರಾಟದಲ್ಲಿ ಕೈ ಜೋಡಿಸಬೇಕು’ ಎಂದು ಹೇಳಿದ ಮಾತೆ ಮಹಾದೇವಿ, ಮಹಾಸಭಾಗೆ ಪರ್ಯಾಯವಾಗಿ ಸ್ಥಾಪನೆಯಾಗುತ್ತಿರುವ ವಿಶ್ವ ಲಿಂಗಾಯತ ಪರಿಷತ್ಗೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.