ಹೊಸದುರ್ಗ: ಜನಿಸಿದ ಮಕ್ಕಳಿಗೆ, ಸಾಕು ಪ್ರಾಣಿಗಳಿಗೆ ಪ್ರೀತಿಯಿಂದ ಕಿವಿ ಚುಚ್ಚಿ ಓಲೆ, ರಿಂಗು ಹಾಕುವುದು ಸಾಮಾನ್ಯ. ಆದರೆ, ತಾಲ್ಲೂಕಿನ ಐತಿಹಾಸಿಕ ಕಂಚೀಪುರದ ಕಂಚೀವರದರಾಜ ಸ್ವಾಮಿಯ ಭಕ್ತರು ಸಂಕ್ರಾಂತಿಯಂದು ಕಾಡಿನಲ್ಲಿದ್ದ ಮೊಲವನ್ನು ಜೀವಂತವಾಗಿ ಹಿಡಿದು ತಂದು, ದೇವರ ಸನ್ನಿಧಿಯಲ್ಲಿ ಅದಕ್ಕೆ ಕಿವಿಯೋಲೆ ಹಾಕಿ ಮತ್ತೆ ಕಾಡಿಗೆ ಬಿಡುವ ಮೂಲಕ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.