ಮಾಜಿ ಸೈನಿಕ ನರಸಿಂಹ ಎಂಬುವರಿಗೆ ಸೇರಿದ ಕೋಳಿಫಾರಂಗೆ ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ಚಿರತೆಯು ಪ್ರವೇಶಿಸಿತ್ತು. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಇಲಾಖೆಯ ಸಿಬ್ಬಂದಿ ಬೋನು ತಂದು, ಫಾರಂ ಕಟ್ಟಡದ ತಂತಿಗಳನ್ನು ತುಂಡರಿಸಿ ಬೋನಿನ ಒಳಗೆ ಇಟ್ಟರು. ಅದರೊಳಗೆ ಇರಿಸಲಾಗಿದ್ದ ನಾಯಿ ಮರಿಯ ಆಸೆಗೆ ಒಳನುಗ್ಗಿದ ಚಿರತೆ ಸೆರೆಯಾಯಿತು.