‘ಹಲವರು ಪಡಿತರ ಪಡೆಯದೆ, ಅಕ್ಕಿ ಮಾರಾಟದ ದೂರುಗಳು ಬರುತ್ತಿವೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಆಹಾರ ಸಚಿವರ ಜೊತೆಗೂ ಸಭೆ ಮಾಡಲಾಗಿದೆ. ಎಂಒ4, ಜ್ಯೋತಿ, ಅಭಿಲಾಷ, ಜಯ ತಳಿಯ ಅಕ್ಕಿ ಪಡೆಯಲು ಕೇಂದ್ರದ ಅನುಮತಿ ಬೇಕಿದೆ. ಕರಾವಳಿ ಜಿಲ್ಲೆಯ ಕೆಂಪು ಕುಚ್ಚಲಕ್ಕಿ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುವುದು’ ಎಂದರು.