‘ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಪಿಡಿಜಿ ಕೊಪ್ಪಲು ನಮ್ಮೂರು. ನಾನು ಪ್ರಥಮ ಪಿ.ಯು ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ದ್ವಿತೀಯ ಪಿ.ಯುದಲ್ಲಿದ್ದಾಗ ಮದುವೆ ಮಾಡಿಸಿದರು. ಆದರೆ, ನನಗೆ ಆಹಾರ ತಂತ್ರಜ್ಞಾನದಲ್ಲಿ ವ್ಯಾಸಂಗ ಮುಂದುವರಿಸುವ ಆಸಕ್ತಿ ಇತ್ತು. ಇದನ್ನು ಗಮನಿಸಿದ ಪತಿ ಪಿ.ಎಸ್. ರೋಹಿತ್ ಓದು ಮುಂದುವರಿಸಲು ಪ್ರೋತ್ಸಾಹ ನೀಡಿದರು. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವನ್ನು ಹಾಸನದ ಕೃಷಿ ಕಾಲೇಜಿನಲ್ಲಿ ಮಾತ್ರ ಬೋಧಿಸುವುದರಿಂದ ಅಲ್ಲಿ ಪ್ರವೇಶ ಪಡೆದೆ’ ಎಂದು ಶೀಲಾ ಹೇಳಿದರು.