ವಿರಾಜಪೇಟೆಯ ಕಾಫಿ ಪ್ಲಾಂಟರ್ ಸಿ.ಪಿ.ಭರತನ್, ‘ನನ್ನ ಪುತ್ರಿ ಸುಧಾಗೆ ವೈದ್ಯಕೀಯ ಪದವಿ ಸೀಟು ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ರ ಭರತ್ ಹೆಗಡೆ ನನ್ನಿಂದ ಎರಡೂವರೆ ಲಕ್ಷ ರೂಪಾಯಿ ಪಡೆದಿದ್ದಾರೆ. ಆದರೆ, ಕೊಟ್ಟ ಮಾತಿನಿಂತೆ ಸೀಟು ಕೊಡಿಸಿಲ್ಲ ಹಾಗೂ ಹಣ ವಾಪಸು ಕೇಳಿದರೆ ₹ 50 ಸಾವಿರ ಮಾತ್ರ ಕೊಟ್ಟಿದ್ದಾರೆ’ ಎಂದು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.