<p><strong>ಬೆಂಗಳೂರು: </strong>9ನೇ ತರಗತಿ, ಎಸ್ಎಸ್ಎಲ್ಸಿ ಪಾಸಾದವರು, ಆರ್ಟಿಐ ಕಾರ್ಯಕರ್ತರು, ಹೋಟೆಲ್ ಕೆಲಸಗಾರರು, ಅಡುಗೆ ಕೆಲಸ ಮಾಡುವವರೂ ರಾಜ್ಯ ಮಾಹಿತಿ ಆಯುಕ್ತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ!</p>.<p>ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಮಾಹಿತಿ ಆಯುಕ್ತ ಹುದ್ದೆಗೆ ಸಿಬ್ಬಂದಿ ಮತ್ತು ಆಡಳಿತಸುಧಾರಣಾ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿರುವ 170 ಮಂದಿಯ ಪಟ್ಟಿ ನೋಡಿದರೆ ಆಯುಕ್ತ ಹುದ್ದೆ ಅಷ್ಟು ಸಲೀಸಾಗಿ ಸಿಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ.</p>.<p>ಆಯುಕ್ತ ಹುದ್ದೆಗೆ ಅರ್ಹತೆ ಎನ್ನಬಹುದಾದ ವೃತ್ತಿ ನಿಭಾಯಿಸಿದ ನಿವೃತ್ತ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿಗಳು, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಹೈಕೋರ್ಟ್ ವಕೀಲರು, ಅತಿಥಿ ಉಪನ್ಯಾಸಕರು, ವೃತ್ತಿನಿರತ ಮತ್ತು ಹವ್ಯಾಸಿ ಪತ್ರಕರ್ತರೂ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿ ಇದ್ದಾರೆ.</p>.<p>ಕೃಷಿಯಲ್ಲಿ ಅನುಭವ ಇದ್ದ ಮಾತ್ರಕ್ಕೆ ಆಯುಕ್ತ ಹುದ್ದೆಗೆ ಅರ್ಹತೆ ಎಂದು ಪರಿಗಣಿಸುವಂತಿಲ್ಲ. ಹಾಗಿದ್ದರೂ ವ್ಯವಸಾಯ<br />ಗಾರರೂ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ನಮೂನೆಯಲ್ಲಿ ಕ್ಷೇತ್ರ ಪರಿಣತಿ ಏನಿದೆ ಎಂದು ವಿವರಿಸುವಾಗ, ಕೆಲವರು ನೀಡಿರುವ ಅನುಭವವೇ ಕುತೂಹಲಕಾರಿಯಾಗಿದೆ. ಒಬ್ಬರು ಹೋಟೆಲ್ನಲ್ಲಿ ಕೆಲಸ ಎಂದಿದ್ದರೆ, ಮತ್ತೊಬ್ಬರು ಪುಸ್ತಕ<br />ದಂಗಡಿಯಲ್ಲಿ ಕೆಲಸ ಎಂದು ಬರೆದು<br />ಕೊಂಡಿದ್ದಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ನೈಪುಣ್ಯ ಅಥವಾ ಜ್ಞಾನ ಇರಬೇಕು ಎಂದಿದ್ದರೂ ಆರ್ಟಿಐ ಕಾರ್ಯಕರ್ತರು, ಈಗಷ್ಟೇ ಪತ್ರಿಕೋದ್ಯಮ ಪದವಿ ಪಡೆದು ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವವರು, ತಾಂತ್ರಿಕ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬುಕ್ ಹೌಸ್ನಲ್ಲಿ ಕೆಲಸ ಮಾಡುವವರೂ ಅರ್ಜಿ ಸಲ್ಲಿಸಿದ್ದಾರೆ.</p>.<p>‘ಮಾಹಿತಿ ಆಯುಕ್ತರ ಹುದ್ದೆಗೆ ಈ ರೀತಿಯ ಅರ್ಜಿಗಳು ಸಲ್ಲಿಕೆಯಾಗುವುದು ಹೊಸದೇನೂ ಅಲ್ಲ. ಈ ಹಿಂದೆ ಮೂರು ಹುದ್ದೆಗಳಿಗೆ 450ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಲು ಎಲ್ಲರೂ ಅರ್ಹರು, ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿಯು ‘ಅರ್ಹರು’ ಯಾರು<br />ಎಂಬುದನ್ನು ತೀರ್ಮಾನಿಸುತ್ತದೆ’ ಎಂದು ಮಾಹಿತಿ ಆಯುಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ದಂಡ ಪಾವತಿಸಿದ್ದವರಿಂದಲೂ ಅರ್ಜಿ:</strong> ‘ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎನ್. ಭೃಂಗೇಶ್ ಅವರು ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರನ್ನು ಆಯ್ಕೆ ಮಾಡಬಾರದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆಹೈಕೋರ್ಟ್ ವಕೀಲ ಕೊಡೂರು ವೆಂಕಟೇಶ್ ದೂರು ನೀಡಿದ್ದಾರೆ.</p>.<p>‘ಭೃಂಗೇಶ್ ಅವರು 2017ರಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದಾಗ ನಾನು ಕೇಳಿದ್ದ ಮಾಹಿತಿ ನೀಡದ ಕಾರಣಕ್ಕೆ ಮಾಹಿತಿ ಆಯೋಗ ₹10 ಸಾವಿರ ದಂಡ ವಿಧಿಸಿತ್ತು. ಅದನ್ನು ಅವರು ಪಾವತಿಸಿದ್ದರು. ಅವರಿಗೆ ಅವಕಾಶ ಕಲ್ಪಿಸಬಾರದು. ಕಲ್ಪಿಸಿದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>9ನೇ ತರಗತಿ, ಎಸ್ಎಸ್ಎಲ್ಸಿ ಪಾಸಾದವರು, ಆರ್ಟಿಐ ಕಾರ್ಯಕರ್ತರು, ಹೋಟೆಲ್ ಕೆಲಸಗಾರರು, ಅಡುಗೆ ಕೆಲಸ ಮಾಡುವವರೂ ರಾಜ್ಯ ಮಾಹಿತಿ ಆಯುಕ್ತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ!</p>.<p>ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಮಾಹಿತಿ ಆಯುಕ್ತ ಹುದ್ದೆಗೆ ಸಿಬ್ಬಂದಿ ಮತ್ತು ಆಡಳಿತಸುಧಾರಣಾ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿರುವ 170 ಮಂದಿಯ ಪಟ್ಟಿ ನೋಡಿದರೆ ಆಯುಕ್ತ ಹುದ್ದೆ ಅಷ್ಟು ಸಲೀಸಾಗಿ ಸಿಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ.</p>.<p>ಆಯುಕ್ತ ಹುದ್ದೆಗೆ ಅರ್ಹತೆ ಎನ್ನಬಹುದಾದ ವೃತ್ತಿ ನಿಭಾಯಿಸಿದ ನಿವೃತ್ತ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿಗಳು, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಹೈಕೋರ್ಟ್ ವಕೀಲರು, ಅತಿಥಿ ಉಪನ್ಯಾಸಕರು, ವೃತ್ತಿನಿರತ ಮತ್ತು ಹವ್ಯಾಸಿ ಪತ್ರಕರ್ತರೂ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿ ಇದ್ದಾರೆ.</p>.<p>ಕೃಷಿಯಲ್ಲಿ ಅನುಭವ ಇದ್ದ ಮಾತ್ರಕ್ಕೆ ಆಯುಕ್ತ ಹುದ್ದೆಗೆ ಅರ್ಹತೆ ಎಂದು ಪರಿಗಣಿಸುವಂತಿಲ್ಲ. ಹಾಗಿದ್ದರೂ ವ್ಯವಸಾಯ<br />ಗಾರರೂ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ನಮೂನೆಯಲ್ಲಿ ಕ್ಷೇತ್ರ ಪರಿಣತಿ ಏನಿದೆ ಎಂದು ವಿವರಿಸುವಾಗ, ಕೆಲವರು ನೀಡಿರುವ ಅನುಭವವೇ ಕುತೂಹಲಕಾರಿಯಾಗಿದೆ. ಒಬ್ಬರು ಹೋಟೆಲ್ನಲ್ಲಿ ಕೆಲಸ ಎಂದಿದ್ದರೆ, ಮತ್ತೊಬ್ಬರು ಪುಸ್ತಕ<br />ದಂಗಡಿಯಲ್ಲಿ ಕೆಲಸ ಎಂದು ಬರೆದು<br />ಕೊಂಡಿದ್ದಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ನೈಪುಣ್ಯ ಅಥವಾ ಜ್ಞಾನ ಇರಬೇಕು ಎಂದಿದ್ದರೂ ಆರ್ಟಿಐ ಕಾರ್ಯಕರ್ತರು, ಈಗಷ್ಟೇ ಪತ್ರಿಕೋದ್ಯಮ ಪದವಿ ಪಡೆದು ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವವರು, ತಾಂತ್ರಿಕ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬುಕ್ ಹೌಸ್ನಲ್ಲಿ ಕೆಲಸ ಮಾಡುವವರೂ ಅರ್ಜಿ ಸಲ್ಲಿಸಿದ್ದಾರೆ.</p>.<p>‘ಮಾಹಿತಿ ಆಯುಕ್ತರ ಹುದ್ದೆಗೆ ಈ ರೀತಿಯ ಅರ್ಜಿಗಳು ಸಲ್ಲಿಕೆಯಾಗುವುದು ಹೊಸದೇನೂ ಅಲ್ಲ. ಈ ಹಿಂದೆ ಮೂರು ಹುದ್ದೆಗಳಿಗೆ 450ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಲು ಎಲ್ಲರೂ ಅರ್ಹರು, ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿಯು ‘ಅರ್ಹರು’ ಯಾರು<br />ಎಂಬುದನ್ನು ತೀರ್ಮಾನಿಸುತ್ತದೆ’ ಎಂದು ಮಾಹಿತಿ ಆಯುಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ದಂಡ ಪಾವತಿಸಿದ್ದವರಿಂದಲೂ ಅರ್ಜಿ:</strong> ‘ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎನ್. ಭೃಂಗೇಶ್ ಅವರು ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರನ್ನು ಆಯ್ಕೆ ಮಾಡಬಾರದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆಹೈಕೋರ್ಟ್ ವಕೀಲ ಕೊಡೂರು ವೆಂಕಟೇಶ್ ದೂರು ನೀಡಿದ್ದಾರೆ.</p>.<p>‘ಭೃಂಗೇಶ್ ಅವರು 2017ರಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದಾಗ ನಾನು ಕೇಳಿದ್ದ ಮಾಹಿತಿ ನೀಡದ ಕಾರಣಕ್ಕೆ ಮಾಹಿತಿ ಆಯೋಗ ₹10 ಸಾವಿರ ದಂಡ ವಿಧಿಸಿತ್ತು. ಅದನ್ನು ಅವರು ಪಾವತಿಸಿದ್ದರು. ಅವರಿಗೆ ಅವಕಾಶ ಕಲ್ಪಿಸಬಾರದು. ಕಲ್ಪಿಸಿದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>