‘ರಾತ್ರಿ 1 ಗಂಟೆವರೆಗೆ ಅವರ ಜತೆಗೂ ಗಲಾಟೆ ಮಾಡಿದ್ದ ಆ ವ್ಯಕ್ತಿ, ಎಲ್ಲರ ನೆಮ್ಮದಿಗೆ ಭಂಗವುಂಟು ಮಾಡಿದ್ದ. ಹೀಗಾಗಿ, ಟಿಟಿಇ ಬಳಿ ಆತನ ಹೆಸರು–ವಿಳಾಸದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾದೆ. ಆಗ, ‘ಏಯ್, ಬ್ಲಡಿ ಪೊಲಿಟೀಷಿಯನ್. ನಾನು ಮನಸ್ಸು ಮಾಡಿದ್ರೆಇಲ್ಲೇ ಶೂಟ್ ಮಾಡಿ ಸಾಯಿಸಬಹುದು. ಹೆಸರು ತೆಗೆದುಕೊಂಡು ಅದೇನ್ ಮಾಡ್ಕೋತಿಯೋ ಮಾಡ್ಕೊ’ ಎಂದು ಕೂಗಾಡಿ ಹುಬ್ಬಳ್ಳಿ ನಿಲ್ದಾಣದಲ್ಲಿ ಇಳಿದು ಹೋದ. ಈತ ನಿಜವಾಗಿಯೂ ಸೈನಿಕನೇನಾ ಎಂಬುದು ಗೊತ್ತಾಗಬೇಕಿದೆ.ಹೀಗಾಗಿ, ಆ ವ್ಯಕ್ತಿಯನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಬಸವರಾಜ ಹೊರಟ್ಟಿ ದೂರಿನಲ್ಲಿ ವಿವರಿಸಿದ್ದಾರೆ.