ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, “ಧರ್ಮ- ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಇಂತಹ ಅಭಿಯಾನಗಳನ್ನು ಕೆಲವರು ಆರಂಭಿಸಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಂಘ ಪರಿವಾರದ ಏಜೆಂಟರ ಮೂಲಕ ಈ ಕೆಲಸ ಮಾಡಲಾಗುತ್ತಿದೆ. ಈ ರೀತಿ ಮಾಡುವವರು ಭಯೋತ್ಪಾದಕರು. ಅವರನ್ನು ತಕ್ಷಣ ಬಂಧಿಸಬೇಕುʼ ಎಂದು ಆಗ್ರಹಿಸಿದರು.