ಮನಿ ಪವರ್ಗೆ ಬಲಿಯಾದೆ: ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಮಸ್ವಾಮಿ, ‘ನಾನು ಜೆಡಿಎಸ್ ಬಿಡಲಿಲ್ಲ. ಆದರೆ, ಮನಿ ಪವರ್ ಮುಂದೆ ಬಲಿಪಶುವಾದೆ. ಎಲ್ಲ ಪಕ್ಷಗಳಲ್ಲೂ ಲೋಪದೋಷಗಳಿವೆ. ಅಕ್ರಮಗಳನ್ನು ಎತ್ತಿ ಹಿಡಿಯುವುದೇ ತಪ್ಪು, ಶಾಪ ಎನ್ನುವುದಾದರೆ ಅದನ್ನು ಸವಾಲಾಗಿ ಸ್ವೀಕರಿಸುತ್ತೇನೆ’ ಎಂದರು.