ಬೆಳಗಾವಿ: ಸಚಿವ ಸ್ಥಾನ ಸಿಗದಿರುವುದರಿಂದ ಮುನಿಸಿಕೊಂಡಿರುವ ಹಿರಿಯ ಶಾಸಕ ಉಮೇಶ ಕತ್ತಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗದೇ ಹೋಗಿದ್ದು ಅಚ್ಚರಿಗೆ ಕಾರಣವಾಯಿತು.
ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮುಖ್ಯಮಂತ್ರಿ ಇನ್ನೇನು ಬರುತ್ತಿದ್ದಾರೆ ಎನ್ನುವಾಗಲೇ ಅಲ್ಲಿಂದ ಹೊರಟರು.
ಈ ಕುರಿತು ಪ್ರತಿಕ್ರಿಯಿಸಿದ ಕತ್ತಿ, ಮುಖ್ಯಮಂತ್ರಿ ಜೊತೆ ನನಗೇನೂ ಮುನಿಸಿಲ್ಲ. ಅವರು ನಮ್ಮ ನಾಯಕರು. ಈ ಸರ್ಕಾರದಲ್ಲೇ ಮಂತ್ರಿಯಾಗುತ್ತೇನೆ. ಇನ್ನೂ ಹಲವು ವರ್ಷಗಳಷ್ಟು ರಾಜಕೀಯ ಜೀವನ ಇದೆ. ಮುಖ್ಯಮಂತ್ರಿಯೂ ಆಗುತ್ತೇನೆ ಎಂದರು.