ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿರ್ದೇಶನದಂತೆ ಡ್ರಿಲ್ಬಿಟ್ ಸಂಸ್ಥೆಯ ದೇಸಿ ಸಾಫ್ಟ್ವೇರ್ ಅಳವಡಿಸಿಕೊಳ್ಳಲಾಗಿದ್ದು, ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗುವ ಸಂಶೋಧನಾ ಪ್ರಬಂಧಗಳು, ಸಂಶೋಧನಾ ಲೇಖನಗಳಲ್ಲಿ ಕೃತಿಚೌರ್ಯ ಮಾಡುವುದನ್ನು ಈ ಸಾಫ್ಟ್ವೇರ್ ಪತ್ತೆ ಮಾಡಲಿದೆ. ಶೋಧಶುದ್ದಿ ಮೂಲಕ ಕೃತಿಚೌರ್ಯದ ನಿಖರ ಫಲಿತಾಂಶ ನೀಡುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಪಾಲಕ ಬಿ.ಆರ್.ರಾಧಾಕೃಷ್ಣ ಮಾಹಿತಿ ನೀಡಿದ್ದಾರೆ.