'ಸಂಸತ್ ಒಳಗೆ ಯುವಕರು ನುಗ್ಗಿದ ವಿಷಯ ಕುರಿತು ಕಾಂಗ್ರೆಸ್ ಭದ್ರತಾ ಲೋಪ ವಿಷಯವಾಗಿ ರಾಜಕೀಯ ಮಾಡುತ್ತಿದೆ' ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಲೋಪ ಆಗಿರೋದು ಸತ್ಯವೋ ಸುಳ್ಳೋ? ಲೋಪ ಆದಾಗ ಆರೋಪ ಮಾಡುವುದು ತಪ್ಪೇ' ಎಂದು ಪ್ರಶ್ನಿಸಿದರು.
'ಯಾತಿಂದ್ರ ಅವರಿಗೆ ಲೋಕಸಭೆಗೆ ನಿಲ್ಲಿಸಲು ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗಿದೆ' ಎಂಬ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹೇಳಿಕೆಗೆ ಕಿಡಿಕಾರಿದ ಸಿಎಂ, 'ಲೆಹರ್ ಸಿಂಗ್ ಊಹೆ ಮೇಲೆ ಹಾಗೆ ಮಾತನಾಡಿದ್ದಾರೆ. ಬಿಜೆಪಿಯವರಿಗೆ ಸ್ವಲ್ಪ ಬುದ್ಧಿ ಕಡಿಮೆ ಅನಿಸುತ್ತದೆ. ಯತೀಂದ್ರ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲ್ಲ. ಜನರು ಬಂದು ಸ್ಪರ್ಧಿಸುವಂತೆ ಒತ್ತಾಯಿಸಿದರೆ ನಿಲ್ಲಬಹುದು. ಇಲ್ಲ ಅಂದ್ರೆ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ' ಎಂದರು.
ಮೈಸೂರ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರವಾಗಿ ಮಾತನಾಡಿದ ಸಿಎಂ, 'ಸರ್ಕಾರ ಇನ್ನೂ ಆ ಕುರಿತು ಯಾವ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ಪ್ರತಿಕ್ರಿಯಿಸಿದರು.