ಸಿದ್ದರಾಮಯ್ಯ, ಗುಂಡೂರಾವ್ ಸದ್ಯಕ್ಕೆ ಗೈರು: ಬೆಳಗಾವಿ ಅಧಿವೇಶನಕ್ಕೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ನಾಲ್ಕೈದು ದಿನ ಗೈರಾಗಲಿದ್ದಾರೆ. ಉಳಿದವರೆಲ್ಲರೂ ಅಧಿವೇಶನದಲ್ಲಿ ಹಾಜರಿರುತ್ತಾರೆ ಎಂದು ಸಚಿವರು ತಿಳಿಸಿದರು.