‘ಪರಿಷತ್ತು ತನ್ನ ಇತಿಹಾಸದಲ್ಲಿ ಎಂದೂ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಿಲ್ಲ. ಲಂಚ ನೀಡುವ ಅಭ್ಯಾಸ ಬೆಳೆಸಿಕೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆದರೂ, ಬೇಡಿಕೆ ಮುಂದುವರಿಸಿದ ಕಾರಣ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇವೆ. ತಪ್ಪು ವರದಿ ನೀಡಬಹುದು ಎಂಬ ಆತಂಕವಿದೆ. ಹಾಗಾಗಿ, ಹೊಸದಾಗಿ ಎಲ್ಐಸಿ ಕಳುಹಿಸುವಂತೆ ಕೋರಿದ್ದೇವೆ’ ಎಂದು ಶಂಕರ್ ಹೇಳಿದರು.