ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಗುರುವಾರ ಸಂಜೆ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ವಿಶ್ರಾಂತ ಜೀವನಕ್ಕೆ ಶುಭ ಕೋರಿದರು.
ರಾಜ್ಯಕ್ಕೆ ಹೊಸ ರಾಜ್ಯಪಾಲರಾಗಿ ತಾವರ್ಚಂದ್ ಗೆಹ್ಲೋತ್ ಅವರು ನಿಯುಕ್ತಿಗೊಂಡಿದ್ದಾರೆ. ವಜುಭಾಯಿ ವಾಲಾ ಶುಕ್ರವಾರ ಗುಜರಾತ್ಗೆ ತೆರಳುವ ಸಾಧ್ಯತೆ ಇದೆ. ಗೆಹ್ಲೋತ್ ಅವರು ಬೆಂಗಳೂರಿಗೆ ಶನಿವಾರ ಸಂಜೆ ಬರಲಿದ್ದು, ರಾಜ್ಯಪಾಲರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಜತೆ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಕೂಡ ಇದ್ದರು.