ಕಲಬುರ್ಗಿ: ತಾಲ್ಲೂಕಿನ ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಅಭ್ಯರ್ಥಿಗಳು ಗ್ರಾಮದಿಂದ ದುಡಿಯಲು ಮಹಾರಾಷ್ಟ್ರದ ಮುಂಬೈ, ಪುಣೆ, ಕಲ್ಯಾಣ್ಗೆ ತೆರಳಿದ ಗ್ರಾಮದವರನ್ನು ಸ್ವಂತ ಖರ್ಚಿನಲ್ಲಿ ಕರೆಸಿಕೊಂಡಿದ್ದಾರೆ.
ಸೋಮವಾರ ರಾತ್ರಿಯೇ 25 ಜನ ಮುಂಬೈ, ಪುಣೆಯಿಂದ ಹೊರಟವರು ಇದೀಗ ಗ್ರಾಮ ತಲುಪಿದ್ದು, ಮತದಾನ ಮಾಡುತ್ತಿದ್ದಾರೆ.
ಪಟ್ಟಣ ಗ್ರಾಮ ಪಂಚಾಯಿತಿಯ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಂದನೇ ವಾರ್ಡ್ನಿಂದ ಸ್ಪರ್ಧಿಸಿರುವ ಅಶೋಕ ಎಂಬುವವರಿಗೆ ಮತ ಹಾಕಿಸಲು ಜನರನ್ನು ಕರೆಸಿಕೊಂಡಿದ್ದೇವೆ ಎಂದು ಅಶೋಕ ಅವರ ಸಹೋದರ ಮಲ್ಲಿಕಾರ್ಜುನ 'ಪ್ರಜಾವಾಣಿ'ಗೆ ತಿಳಿಸಿದರು.