ಕೃತಿ ಬಿಡುಗಡೆ ಮಾಡಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್ ಮಾತನಾಡಿ, ‘ಈ ಪುಸ್ತಕಗಳು ಕನ್ನಡ ಸಂಸ್ಕೃತಿಯ ತಿಳಿವಳಿಕೆ ಮಟ್ಟವನ್ನು ಹೆಚ್ಚಿಸುತ್ತವೆ. ಸಿದ್ದಲಿಂಗಯ್ಯ ಅವರು ಎಲ್ಲೆಲ್ಲಾ ಇದ್ದರೋ ಅಲ್ಲೆಲ್ಲಾ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಆತ್ಮಚರಿತ್ರೆ ಅಂದರೆ ಒಂದು ಸಮುದಾಯದ ಆತ್ಮಚರಿತ್ರೆ. ಅವರ ಹಾಡುಗಳಿಗೆ ಒಂದು ಸಂಸ್ಕೃತಿಯನ್ನು ನೋಡುವ ಶಕ್ತಿ ಇದೆ’ ಎಂದರು.