ಬೆಂಗಳೂರು: ಕಲಾಪದ ಎಲ್ಲ ದಿನಗಳು ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಬಹುಮಾನ ಕೊಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಮಂಗಳವಾರ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಬಂದ ಶಾಸಕರ ಹೆಸರುಗಳನ್ನು ಓದಿದ ಖಾದರ್, ಬೇಗನೆ ಬಂದು ಕುಳಿತ ಶಾಸಕರನ್ನು ಅಭಿನಂದಿಸಿದರು. ‘ಇವತ್ತು ಬೇಗ ಬಂದವರ ಹೆಸರನ್ನು ಅಧಿಕಾರಿಗಳು ಬರೆದಿಟ್ಟುಕೊಂಡಿದ್ದಾರೆ. ಅವರ ಹೆಸರುಗಳನ್ನು ಮಾರನೇ ದಿನ ಓದಿ ಹೇಳುತ್ತೇನೆ’ ಎಂದರು.
‘ಬಹುಮಾನ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಇದರಿಂದ ಸಮಾಜಕ್ಕೆ ಬೇರೆ ಸಂದೇಶ ಹೋಗುತ್ತದೆ. ಬಹುಮಾನದ ಬದಲಿಗೆ ಪ್ರಮಾಣಪತ್ರ ನೀಡುವುದು ಸೂಕ್ತ’ ಎಂದು ಸದಸ್ಯರೊಬ್ಬರು ನೀಡಿದ ಸಲಹೆಯನ್ನು ಖಾದರ್ ಒಪ್ಪಿಕೊಂಡರು.