ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪದ ಎಲ್ಲ ದಿನಗಳು ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಪ್ರಮಾಣ ಪತ್ರ: ಯು.ಟಿ.ಖಾದರ್

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕಲಾಪದ ಎಲ್ಲ ದಿನಗಳು ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಬಹುಮಾನ ಕೊಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.

ಮಂಗಳವಾರ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಬಂದ ಶಾಸಕರ ಹೆಸರುಗಳನ್ನು ಓದಿದ ಖಾದರ್‌, ಬೇಗನೆ ಬಂದು ಕುಳಿತ ಶಾಸಕರನ್ನು ಅಭಿನಂದಿಸಿದರು. ‘ಇವತ್ತು ಬೇಗ ಬಂದವರ ಹೆಸರನ್ನು ಅಧಿಕಾರಿಗಳು ಬರೆದಿಟ್ಟುಕೊಂಡಿದ್ದಾರೆ. ಅವರ ಹೆಸರುಗಳನ್ನು ಮಾರನೇ ದಿನ ಓದಿ ಹೇಳುತ್ತೇನೆ’ ಎಂದರು.

‘ಬಹುಮಾನ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಇದರಿಂದ ಸಮಾಜಕ್ಕೆ ಬೇರೆ ಸಂದೇಶ ಹೋಗುತ್ತದೆ. ಬಹುಮಾನದ ಬದಲಿಗೆ ಪ್ರಮಾಣಪತ್ರ ನೀಡುವುದು ಸೂಕ್ತ’ ಎಂದು ಸದಸ್ಯರೊಬ್ಬರು ನೀಡಿದ ಸಲಹೆಯನ್ನು ಖಾದರ್ ಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT