ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಿದೆ. ಡಿ.ದೇವರಾಜ ಅರಸು ಅವರ ನಂತರ ಯಾರೂ ಅವರ ಸಮಸ್ಯೆಗಳನ್ನು ಅರಿಯಲು ಹೋಗಲಿಲ್ಲ. ನಿರುದ್ಯೋಗ ಭತ್ಯೆ ನೀಡಬೇಕು. ಶುಲ್ಕರಹಿತ ಪರೀಕ್ಷೆಗಳನ್ನು ಏರ್ಪಡಿಸಬೇಕು. ಬಹುತೇಕ ಪದವೀಧರರಲ್ಲಿ ಅರ್ಹತೆ ಹಾಗೂ ಪ್ರತಿಭೆ ಇದ್ದರೂ ಶುಲ್ಕ ಭರಿಸಲು ಹಣವಿಲ್ಲದೆ, ಪರೀಕ್ಷೆಗಳನ್ನು ಬರೆಯಲಾಗುವುದಿಲ್ಲ. ಇಂಥವರು ಬಹುಸಂಖ್ಯಾತದಲ್ಲಿದ್ದಾರೆ. ಇವರಿಗೆಲ್ಲ ಭತ್ಯೆ ನೀಡುವ ಯೋಜನೆ ಪುನರಾರಂಭಿಸಲು ಪ್ರಯತ್ನಿಸುವೆ. ಇಂಥ ಬಡ ಪದವೀಧರ ನಿರುದ್ಯೋಗಿಗಳ ಧ್ವನಿಯಾಗಲಿರುವುದು ನನ್ನ ಗೆಲುವಿನ ನಡೆಯನ್ನು ಸಲೀಸುಗೊಳಿಸಲಿದೆ.