ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಕುರಿತು ಸಿದ್ದರಾಮಯ್ಯ ಹೇಳಿಕೆ : ಕಲಾಪ ಕಲಹ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಾತಿಗೆ ಆಕ್ಷೇಪ l ಕಾಂಗ್ರೆಸ್ – ಬಿಜೆಪಿ ಸದಸ್ಯರ ಗದ್ದಲ
Published : 18 ಮಾರ್ಚ್ 2025, 0:08 IST
Last Updated : 18 ಮಾರ್ಚ್ 2025, 0:08 IST
ಫಾಲೋ ಮಾಡಿ
Comments
ಆರ್‌ಎಸ್‌ಎಸ್‌ ಕುರಿತು ಮುಖ್ಯಮಂತ್ರಿಯವರು ಆಡಿದ ಮಾತು ಅಸಂಸದೀಯವಲ್ಲ. ನಿಮ್ಮ ಸಮಸ್ಯೆ ಏನು? ಇದೇ ತರಹ ಆಡಿದ್ರೆ ರಾಜ್ಯದ ಜನ ಏನಂದುಕೊಳ್ಳುತ್ತಾರೆ
ಕೆ.ಎಂ.ಶಿವಲಿಂಗೇಗೌಡ, ಸಭಾಧ್ಯಕ್ಷ ಪೀಠದಿಂದ
ಆರ್​ಎಸ್​ಎಸ್ ಬಗ್ಗೆ ಇಲ್ಲಿ ಮಾತನಾಡಬೇಡಿ . ಧಮ್ ಇದ್ರೆ ಹೊರಗೆ ಹೋಗಿ ಮಾತಾಡಿ, ಸದನದ ರಕ್ಷಣೆ ಪಡೆದು ಇಲ್ಲಿ ಮಾತನಾಡಬೇಡಿ
ಆರ್‌.ಅಶೋಕ, ವಿರೋಧಪಕ್ಷದ ನಾಯಕ
ನಿಮಗೆಲ್ಲ ಹೆದರಿಕೊಳ್ಳಲ್ಲ.ನಿಮ್ಮನ್ನು ಎದುರಿಸಲು ನಾನು ತಯಾರಿದ್ದೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಏನಾಗುತ್ತೋ ನೋಡೋಣ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಧಮ್ಕಿ ಹಾಕ್ತಿಯೇನೊ ಆಚೆ ಬಾ...
ಬಿಜೆಪಿಯ ಭರತ್‌ ಶೆಟ್ಟಿ ಅವರು ಮುಖ್ಯಮಂತ್ರಿ ಕಡೆ ಕೈತೋರಿಸಿ ‘ಸರಿಯಾದ ಉತ್ತರ ನೀಡಿ’ ಎಂದಿದ್ದನ್ನು ಕೇಳಿ ಕಾಂಗ್ರೆಸ್‌ನ ನರೇಂದ್ರಸ್ವಾಮಿ ಅವರು ಭರತ್‌ ಶೆಟ್ಟಿ ವಿರುದ್ಧ ಗರಂ ಆದರು. ಆಗ ಮಧ್ಯ ಪ್ರವೇಶಿಸಿದ ಬೈರತಿ ಬಸವರಾಜ ಅವರು, ‘ಎಲ್ಲದಕ್ಕೂ ಮೂಗು ತೂರಿಸಬೇಡ’ ಎಂದು ನರೇಂದ್ರ ಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದರು. ‘ಕೈ ತೋರಿಸಿ ಮಾತನಾಡುವುದೇನು? ಗೂಂಡಾಗಿರಿ ಮಾಡ್ತೀರಾ ನಾನು ತೋರಿಸುತ್ತೇನೆ’ ಎಂದು ನರೇಂದ್ರ ಸ್ವಾಮಿ ಹೇಳಿದರು. ಆಗ ಸಿಟ್ಟಾದ ಬೈರತಿ ಬಸವರಾಜ, ‘ಏನ್‌ ಧಮ್ಕಿ ಹಾಕ್ತಿಯೇನೊ ಆಚೆ ಬಾ...’ ಎಂದು ನರೇಂದ್ರ ಸ್ವಾಮಿಗೆ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT