ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು (ಎನ್ಎಸ್ಎಸ್) ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಆಯೋಜಿಸಿತ್ತು. ಈ ವೇಳೆ ಒಳನುಗ್ಗಿ ಬಂದ ಕಾಕತಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ ಹಾಗೂ ಸಂಗಡಿಗರು, ಈ ಕಾರ್ಯಕ್ರಮಕ್ಕೆ ಶಾಸಕರನ್ನು ಏಕೆ ಆಹ್ವಾನಿಸಿಲ್ಲವೆಂದು ಕೂಗಾಡಿ, ರಾದ್ಧಾಂತ ನಡೆಸಿದರು.