ದೂರಿನಲ್ಲಿ ಏನಿದೆ: ‘ರವಿಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಪ್ರಮುಖ ಕಡತಗಳನ್ನು ನಿಯಮ ಮೀರಿ ವಿಲೇವಾರಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಅರ್ಜಿದಾರರು, ಸಂಘ ಸಂಸ್ಥೆಗಳು ನೀಡಿದ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಅಧೀನ ಕಚೇರಿಗಳಿಂದ ಯಾವುದೇ ವರದಿ ಪಡೆಯದೇ ಅರ್ಜಿದಾರರ ಪರವಾಗಿ ಆದೇಶ ಮಾಡುತ್ತಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.