‘ಮಠದಹಳ್ಳಿಯಲ್ಲಿ ಅರ್ಜಿದಾರರಿಗೆ ಸೇರಿದ 3 ಎಕರೆ ಜಮೀನನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ 1972–73ರಲ್ಲೇ ಸ್ವಾಧೀನಪಡಿಸಿ ಕೊಂಡಿದೆ. ಇದಕ್ಕಾಗಿ ₹45,150 ಪರಿಹಾರವೂ ನಿಗದಿಯಾಗಿತ್ತು. ಆದರೆ, ಐದು ದಶಕ ಕಳೆದರೂ ಪರಿಹಾರ ಸಿಕ್ಕಿಲ್ಲ. ಭೂಮಿ ಕಳೆದುಕೊಂಡವರು ನ್ಯಾಯ ಪಡೆದುಕೊಳ್ಳಲು ಕೋರ್ಟ್, ಕಚೇರಿ ಅಲೆದಿದ್ದಾರೆ. ಭೂಮಾಲೀಕರ ಪರವಾಗಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವೂ ಆದೇಶ ಮಾಡಿದೆ. ಆದರೂ ಆದೇಶ ಪಾಲನೆ ಮಾಡಿಲ್ಲ. ಇದು ಬಿಡಿಎ ನಿರ್ಲಕ್ಷ್ಯಕ್ಕೆ ಕೈಗನ್ನಡಿ‘ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.