‘ಇಷ್ಟರಲ್ಲೇ ಸಿಂಹ, ಆನೆಗಳನ್ನು ತಂದು ಆ ಎರಡು ಸಫಾರಿ ಆರಂಭಿಸಲಾಗುವುದು. ಅದಾದ ಬಳಿಕ ಹಂತ ಹಂತವಾಗಿಚಿರತೆ, ಕತ್ತೆಕಿರುಬ, ಕರಡಿ, ಬಿಳಿ ನವಿಲು, ಮೊಸಳೆಗಳನ್ನು ತರಲಾಗುವುದು. ಈಗಾಗಲೇ ಕೃಷ್ಣಮೃಗ, ಜಿಂಕೆ ಹಾಗೂ ನೀಲ್ಗಾಯ್ ಉದ್ಯಾನಕ್ಕೆ ತರಲಾಗಿದ್ದು, ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಅದಕ್ಕೆ ಸಾಕ್ಷಿ ಅವುಗಳ ಸಂತತಿ ವೃದ್ಧಿಯಾಗುತ್ತಿರುವುದು’ ಎಂದು ತಿಳಿಸಿದರು.