ಅಲೆಮಾರಿ ಜನಾಂಗಗಳು ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿವೆ. ಪ್ರಸ್ತುತ ಜನಾಂಗದ ಅಭಿವೃದ್ಧಿಗೆ ಇರುವ ಕಾರ್ಯಕ್ರಮಗಳ ಜತೆಗೆ ಹೆಚ್ಚುವರಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು, ಸ್ಥಿತಿಗತಿಗಳ ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ತಜ್ಞರು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅಲೆಮಾರಿ ಆಯೋಗ ರಚನೆಯ ಅಗತ್ಯವಿದೆ ಎಂದು ಮುಖಂಡರಾದ ವೆಂಕಟರಮಣಯ್ಯ, ಇಂದೂಧರ ಹೊನ್ನಾಪುರ, ಕಿರಣ್ ಕುಮಾರ್ ಕೊತ್ತಗೆರೆ, ಮಂಜುನಾಥ್ ದಾಯತ್ಕರ್, ವೆಂಕಟೇಶ ದೊರ, ಬಸವರಾಜು ನಾರಯಣಂಕರ್, ಲೋಹಿತಾಕ್ಷ, ಗೋಪಾಲಕೃಷ್ಣ, ಸಿದ್ದಪ್ಪಾಜಿ ಕಮ್ಮಾರ, ರಾಘವೇಂದ್ರ ಮುಕ್ರಿ, ಶೇಖರ್ ಜಟ್ಟಿ ಹಳ್ಳೇರ್ ಪ್ರತಿಪಾದಿಸಿದರು.