ಸಂಭ್ರಮದ ಮೊದಲ ಗೋಷ್ಠಿ ‘ದಲಿತ ಸಂಕಥನ’ದಿಂದಲೇ ಆರಂಭವಾಗುತ್ತಿದೆ. ಲಕ್ಷ್ಮಣ ಗಾಯಕವಾಡ, ಸಿದ್ಧಲಿಂಗಯ್ಯ, ಬಿ.ಎಂ.ಪುಟ್ಟಯ್ಯ, ಟಿ.ಎಸ್.ಗೊರವರ ಇತ್ಯಾದಿ ದಲಿತ ಲೇಖಕರನ್ನು ಟ್ರಸ್ಟ್ ಈ ಬಾರಿ ಆಹ್ವಾನಿಸಿದೆ.ಜತೆಗೆ ಇದೇ ಮೊದಲ ಬಾರಿಗೆ ಬರಗೂರು ರಾಮಚಂದ್ರಪ್ಪ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಏಳನೇ ಆವೃತ್ತಿಯನ್ನು ಅವರೇ ಉದ್ಘಾಟಿಸಿ ಆಶಯ ಭಾಷಣ ಮಾಡಲಿದ್ದಾರೆ.